ಈ ಸರ್ವೆ ನಂಬರ್ನಲ್ಲಿ ನೂರಾರು ಎಕರೆ ಗೋಮಾಳ ಜಮೀನಿದೆ. ಅದನ್ನು ಬಿಟ್ಟು ನಮ್ಮ ಭೂಮಿಯಲ್ಲೇ ಸೋಲಾರ ಬೇಲಿ ಅಳವಡಿಕೆಗೆ ಭೂಮಿಯನ್ನು ಸಮತಟ್ಟು ಮಾಡಿದ್ದಾರೆ. ಜಮೀನು ವಿಚಾರವಾಗಿ ಅರಣ್ಯ ಅಧಿಕಾರಿಗಳು ಪದೇ ಪದೇ ತೊಂದರೆ ನೀಡುತ್ತಿರುವ ಬಗ್ಗೆ ಬಂಗಾರಪೇಟೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ನ್ಯಾಯಾಲಯವು ಜಮೀನಿನಿಂದ ಒಂದು ಕಿ.ಮೀ ವ್ಯಾಪ್ತಿಯವರೆಗೂ ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಆದೇಶಿಸಿದೆ ಎಂದು ತಿಳಿಸಿದ್ದಾರೆ.