<p><strong>ಬಂಗಾರಪೇಟೆ:</strong> ತಾಲ್ಲೂಕಿನ ಸಾಕರಸನಹಳ್ಳಿ ಮಜರಾ ಮಲ್ಲೇಶನಪಾಳ್ಯ ಗ್ರಾಮದ ಸಮೀಪದ ಕಾಡಂಚಿನಲ್ಲಿ ದನ ಮೇಯಿಸುತ್ತಿದ್ದ ದನಗಾಹಿ ಮೇಲೆ ಆನೆ ದಾಳಿ ನಡೆಸಿದೆ.</p>.<p>ದಾಳಿಯಲ್ಲಿ ಮಲ್ಲೇಶನಪಾಳ್ಯದ ನಿವಾಸಿ ತಿಮ್ಮರಾಯಪ್ಪ(55) ಬಲಿಯಾಗಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ. ಎರಡು ವಾರದಿಂದ ಆನೆ ಹಿಂಡು ಕಾಡನಂಚಿನಲ್ಲಿ ಅಲೆದಾಡುತ್ತಿದೆ ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.</p>.<p>ಬೆಳೆ ಹಾನಿ ಜತೆಗೆ ಪ್ರಾಣ ಹಾನಿ ಸಂಭವಿಸುತ್ತಿದೆಯಾದರೂ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಆನೆಗಳು ಕಾಡಿನ ಆಚೆಗೆ ಸಂಚರಿಸಬಾರದು ಎಂದು ಕಾಡಂಚಿನಲ್ಲಿ ದೊಡ್ಡ ಹಳ್ಳ ತೋಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದ ಕಾರಣ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ಸಾಕರಸನಹಳ್ಳಿ ಮಂಜುನಾಥ ಆರೋಪಿಸಿದ್ದಾರೆ.</p>.<p>ಆನೆ ಹಿಂಡು ಕಾಡಂಚಿನ ತೋಟಗಳಿಗೆ ನುಗ್ಗಿದ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುತ್ತಾರೆ. ಅದು ಬಿಟ್ಟರೆ ಅವರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ರೈತರು ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ತಾಲ್ಲೂಕಿನ ಸಾಕರಸನಹಳ್ಳಿ ಮಜರಾ ಮಲ್ಲೇಶನಪಾಳ್ಯ ಗ್ರಾಮದ ಸಮೀಪದ ಕಾಡಂಚಿನಲ್ಲಿ ದನ ಮೇಯಿಸುತ್ತಿದ್ದ ದನಗಾಹಿ ಮೇಲೆ ಆನೆ ದಾಳಿ ನಡೆಸಿದೆ.</p>.<p>ದಾಳಿಯಲ್ಲಿ ಮಲ್ಲೇಶನಪಾಳ್ಯದ ನಿವಾಸಿ ತಿಮ್ಮರಾಯಪ್ಪ(55) ಬಲಿಯಾಗಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ. ಎರಡು ವಾರದಿಂದ ಆನೆ ಹಿಂಡು ಕಾಡನಂಚಿನಲ್ಲಿ ಅಲೆದಾಡುತ್ತಿದೆ ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.</p>.<p>ಬೆಳೆ ಹಾನಿ ಜತೆಗೆ ಪ್ರಾಣ ಹಾನಿ ಸಂಭವಿಸುತ್ತಿದೆಯಾದರೂ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಆನೆಗಳು ಕಾಡಿನ ಆಚೆಗೆ ಸಂಚರಿಸಬಾರದು ಎಂದು ಕಾಡಂಚಿನಲ್ಲಿ ದೊಡ್ಡ ಹಳ್ಳ ತೋಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದ ಕಾರಣ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ಸಾಕರಸನಹಳ್ಳಿ ಮಂಜುನಾಥ ಆರೋಪಿಸಿದ್ದಾರೆ.</p>.<p>ಆನೆ ಹಿಂಡು ಕಾಡಂಚಿನ ತೋಟಗಳಿಗೆ ನುಗ್ಗಿದ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುತ್ತಾರೆ. ಅದು ಬಿಟ್ಟರೆ ಅವರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ರೈತರು ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>