ಬೆಮಲ್ ನಗರದಿಂದ ಬರುವ ರಸ್ತೆಯೂ ಇಳಿಜಾರಿನಲ್ಲಿದೆ. ದಾಸರ ಹೊಸಹಳ್ಳಿಯಿಂದ ಬರುವ ರಸ್ತೆಯೂ ಇಳಿಮುಖವಾಗಿದೆ. ಎರಡೂ ಕೇಂದ್ರಗಳು ಸೇರುವ ಜಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ವೇಗವಾಗಿ ಬರುವ ವಾಹನಗಳು ‘ಜಡ್’ ಚಿಹ್ನೆಯಲ್ಲಿ ಸಾಗಬೇಕಾಗಿದೆ. ಇದೇ ಅಪಘಾತಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಬ್ಯಾರಿಕೇಡ್ ಸಮರ್ಪಕವಾಗಿ ನಿಲ್ಲಲು ಸೈಜ್ ಕಲ್ಲುಗಳನ್ನು ಇಡಲಾಗಿದೆ. ಜಡ್ ಚಿಹ್ನೆಯಲ್ಲಿ ಸಾಗುವಾಗ ಅಕಸ್ಮಾತ್ ಬ್ಯಾರಿಕೇಡ್ ಡಿಕ್ಕಿ ಹೊಡೆದರೆ, ದ್ವಿಚಕ್ರ ವಾಹನ ಚಾಲಕರು ನೇರವಾಗಿ
ಸೈಜ್ ಕಲ್ಲುಗಳ ಮೇಲೆ ಬೀಳುತ್ತಾರೆ. ಇದರಿಂದ ಅಪಘಾತದ ತೀವ್ರತೆ ಹೆಚ್ಚಾಗುತ್ತದೆ.