<p>ಕೋಲಾರ: ಬಗರ್ಹುಕುಂ ಯೋಜನೆಯಡಿ ಭೂ ಮಂಜೂರಾತಿಗೆ ಶಿಫಾರಸು ಮಾಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ತಾಲ್ಲೂಕಿನ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಬಿ.ಕೆ.ವಿಜಯ್ದೇವ ಅವರು ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.</p>.<p>ತಾಲ್ಲೂಕಿನ ತೇರಹಳ್ಳಿ ಮಜರಾ ಪಾಪರಾಜನಹಳ್ಳಿಯ ರೈತ ಸೀನಪ್ಪ ಅವರು 1999ರಿಂದ 3 ಎಕರೆ ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನಿನ ಸಕ್ರಮಕ್ಕಾಗಿ ಅವರು 2019ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ಮಂಜೂರಾತಿಗಾಗಿ ವಿಜಯ್ದೇವರನ್ನು ಸಂಪರ್ಕಿಸಿದ್ದರು. ಆಗ ವಿಜಯ್ದೇವ ಅವರು ಸೀನಪ್ಪರಿಂದ ₹ 5 ಸಾವಿರ ಪಡೆದು ಜಮೀನಿನ ಸರ್ವೆ ಮಾಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಆರೋಪಿ ವಿಜಯ್ದೇವ ಅವರು ಎಕರೆಗೆ ₹ 20 ಸಾವಿರದಂತೆ ಒಟ್ಟಾರೆ ₹ 60 ಸಾವಿರ ಲಂಚ ಕೊಟ್ಟರೆ ಸಾಗುವಳಿ ಚೀಟಿ ಮಂಜೂರಾತಿಗೆ ಶಿಫಾರಸು ಮಾಡುವುದಾಗಿ ಸೀನಪ್ಪರಿಗೆ ಹೇಳಿದ್ದರು. ಈ ಸಂಬಂಧ ಸೀನಪ್ಪ ಎಸಿಬಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಬುಧವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ವಿಜಯ್ದೇವ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಬಗರ್ಹುಕುಂ ಯೋಜನೆಯಡಿ ಭೂ ಮಂಜೂರಾತಿಗೆ ಶಿಫಾರಸು ಮಾಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ತಾಲ್ಲೂಕಿನ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಬಿ.ಕೆ.ವಿಜಯ್ದೇವ ಅವರು ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.</p>.<p>ತಾಲ್ಲೂಕಿನ ತೇರಹಳ್ಳಿ ಮಜರಾ ಪಾಪರಾಜನಹಳ್ಳಿಯ ರೈತ ಸೀನಪ್ಪ ಅವರು 1999ರಿಂದ 3 ಎಕರೆ ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನಿನ ಸಕ್ರಮಕ್ಕಾಗಿ ಅವರು 2019ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ಮಂಜೂರಾತಿಗಾಗಿ ವಿಜಯ್ದೇವರನ್ನು ಸಂಪರ್ಕಿಸಿದ್ದರು. ಆಗ ವಿಜಯ್ದೇವ ಅವರು ಸೀನಪ್ಪರಿಂದ ₹ 5 ಸಾವಿರ ಪಡೆದು ಜಮೀನಿನ ಸರ್ವೆ ಮಾಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಆರೋಪಿ ವಿಜಯ್ದೇವ ಅವರು ಎಕರೆಗೆ ₹ 20 ಸಾವಿರದಂತೆ ಒಟ್ಟಾರೆ ₹ 60 ಸಾವಿರ ಲಂಚ ಕೊಟ್ಟರೆ ಸಾಗುವಳಿ ಚೀಟಿ ಮಂಜೂರಾತಿಗೆ ಶಿಫಾರಸು ಮಾಡುವುದಾಗಿ ಸೀನಪ್ಪರಿಗೆ ಹೇಳಿದ್ದರು. ಈ ಸಂಬಂಧ ಸೀನಪ್ಪ ಎಸಿಬಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಬುಧವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ವಿಜಯ್ದೇವ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>