ತಾಲ್ಲೂಕಿನ ತೇರಹಳ್ಳಿ ಮಜರಾ ಪಾಪರಾಜನಹಳ್ಳಿಯ ರೈತ ಸೀನಪ್ಪ ಅವರು 1999ರಿಂದ 3 ಎಕರೆ ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನಿನ ಸಕ್ರಮಕ್ಕಾಗಿ ಅವರು 2019ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ಮಂಜೂರಾತಿಗಾಗಿ ವಿಜಯ್ದೇವರನ್ನು ಸಂಪರ್ಕಿಸಿದ್ದರು. ಆಗ ವಿಜಯ್ದೇವ ಅವರು ಸೀನಪ್ಪರಿಂದ ₹ 5 ಸಾವಿರ ಪಡೆದು ಜಮೀನಿನ ಸರ್ವೆ ಮಾಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.