<p><strong>ಕೋಲಾರ: </strong>ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿನ ಪುರಾತನ ಚಂದ್ರಮೌಳೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಯಲ್ಪಾಡುವಿನ ವೆಲ್ಲಾಲ ಸತ್ಯ ನಾರಾಯಣಶಾಸ್ತ್ರಿಯವರು ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.</p>.<p>ದೇವಾಲಯದ ದ್ವಾರ ಬಾಗಿಲು ಹಾಗೂ 2ನೇ ಬಾಗಿಲಿನ ವಾಸ್ತು, ಗಣೇಶ, ಸುಬ್ರಮಣಿ ಮತ್ತು ಈಶ್ವರ ಲಿಂಗ ಗಮನಿಸಿದರು. ಗರ್ಭ ಗುಡಿಯಲ್ಲಿ ವಿಗ್ರಹ ಪ್ರತಿಷ್ಠಾಪಿಸುವ ಜಾಗದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.</p>.<p>ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಂದ್ರಮೌಳೇಶ್ವರ ದೇವಾಲಯ 1,500 ವರ್ಷಗಳಷ್ಟು ಪುರಾತನವಾದದ್ದು. ಗ್ರಾಮಸ್ಥರು ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ಮಾಗ ಮಾಸದ ಫೆಬ್ರುವರಿ ತಿಂಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಉತ್ತಮ’ ಎಂದು ತಿಳಿಸಿದರು.</p>.<p>‘ದೇವಾಲಯದಲ್ಲಿನ ಶಿಲ್ಪಕಲೆ, ಬರಹ ಗಮನಿಸಿದರೆ ಇದು ಆವಣಿ, ಕುರುಡಮಲೆ ಗಣಪತಿ ದೇವಾಲಯದ ಸಮಕಾಲೀನ ದೇವಾಲಯವಾಗಿದೆ. ಗ್ರಾಮ ಮತ್ತು ಲೋಕ ಕಲ್ಯಾಣಕ್ಕಾಗಿ ನೈಋತ್ಯ ಭಾಗದಲ್ಲಿ ಸ್ಥಾಪನೆ ಮಾಡಲಾಗಿದೆ. 2020ರ ಫೆ.5ರಿಂದ ಮೂರು ದಿನಗಳ ಕಾಲ ವಿಗ್ರಗ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.</p>.<p>‘₹ 4.20 ಲಕ್ಷ ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಿದ್ದೇವೆ. ಗಣೇಶ, ಸುಬ್ರಮಣಿ, ಪಾರ್ವತಿ, ಈಶ್ವರ ಲಿಂಗ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ದೇವಾಲಯ ನಿರ್ಮಾಣಕ್ಕೆ ಇನ್ನು ₹ 70 ಲಕ್ಷ ಅಗತ್ಯವಿದ್ದು, ದಾನಿಗಳು ನೆರವು ನೀಡಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನಂಜುಂಡಗೌಡ ಮನವಿ ಮಾಡಿದರು.</p>.<p>ಗುತ್ತಿಗೆದಾರ ಕೃಷ್ಣಪ್ಪ, ವಕೀಲ ಲೋಕೇಶ್, ಗ್ರಾಮದ ಮುಖಂಡರಾದ ಶ್ರೀನಿವಾಸ್, ಚಿನ್ನಯ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿನ ಪುರಾತನ ಚಂದ್ರಮೌಳೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಯಲ್ಪಾಡುವಿನ ವೆಲ್ಲಾಲ ಸತ್ಯ ನಾರಾಯಣಶಾಸ್ತ್ರಿಯವರು ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.</p>.<p>ದೇವಾಲಯದ ದ್ವಾರ ಬಾಗಿಲು ಹಾಗೂ 2ನೇ ಬಾಗಿಲಿನ ವಾಸ್ತು, ಗಣೇಶ, ಸುಬ್ರಮಣಿ ಮತ್ತು ಈಶ್ವರ ಲಿಂಗ ಗಮನಿಸಿದರು. ಗರ್ಭ ಗುಡಿಯಲ್ಲಿ ವಿಗ್ರಹ ಪ್ರತಿಷ್ಠಾಪಿಸುವ ಜಾಗದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.</p>.<p>ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಂದ್ರಮೌಳೇಶ್ವರ ದೇವಾಲಯ 1,500 ವರ್ಷಗಳಷ್ಟು ಪುರಾತನವಾದದ್ದು. ಗ್ರಾಮಸ್ಥರು ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು, ಮಾಗ ಮಾಸದ ಫೆಬ್ರುವರಿ ತಿಂಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಉತ್ತಮ’ ಎಂದು ತಿಳಿಸಿದರು.</p>.<p>‘ದೇವಾಲಯದಲ್ಲಿನ ಶಿಲ್ಪಕಲೆ, ಬರಹ ಗಮನಿಸಿದರೆ ಇದು ಆವಣಿ, ಕುರುಡಮಲೆ ಗಣಪತಿ ದೇವಾಲಯದ ಸಮಕಾಲೀನ ದೇವಾಲಯವಾಗಿದೆ. ಗ್ರಾಮ ಮತ್ತು ಲೋಕ ಕಲ್ಯಾಣಕ್ಕಾಗಿ ನೈಋತ್ಯ ಭಾಗದಲ್ಲಿ ಸ್ಥಾಪನೆ ಮಾಡಲಾಗಿದೆ. 2020ರ ಫೆ.5ರಿಂದ ಮೂರು ದಿನಗಳ ಕಾಲ ವಿಗ್ರಗ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.</p>.<p>‘₹ 4.20 ಲಕ್ಷ ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಿದ್ದೇವೆ. ಗಣೇಶ, ಸುಬ್ರಮಣಿ, ಪಾರ್ವತಿ, ಈಶ್ವರ ಲಿಂಗ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ದೇವಾಲಯ ನಿರ್ಮಾಣಕ್ಕೆ ಇನ್ನು ₹ 70 ಲಕ್ಷ ಅಗತ್ಯವಿದ್ದು, ದಾನಿಗಳು ನೆರವು ನೀಡಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನಂಜುಂಡಗೌಡ ಮನವಿ ಮಾಡಿದರು.</p>.<p>ಗುತ್ತಿಗೆದಾರ ಕೃಷ್ಣಪ್ಪ, ವಕೀಲ ಲೋಕೇಶ್, ಗ್ರಾಮದ ಮುಖಂಡರಾದ ಶ್ರೀನಿವಾಸ್, ಚಿನ್ನಯ್ಯ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>