<p><strong>ಕೋಲಾರ</strong>: ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಶಾಲೆಗಳಲ್ಲಿ ಸೋಮವಾರ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.</p>.<p>ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ವೇದಿಕೆಯಲ್ಲಿ ಮಕ್ಕಳೇ ಮುಖ್ಯ ಅತಿಥಿಗಳು, ಉದ್ಘಾಟಕರು, ಭಾಷಣಕಾರರಾಗಿದ್ದು ವಿಶೇಷ.</p>.<p>ಶಿಕ್ಷಕರು ಕೇವಲ ಸ್ವಾಗತಕಾರರು, ನಿರೂಪಕರಾಗಿ ಮಕ್ಕಳಿಗೆ ಮನರಂಜನೆ ನೀಡಿದ್ದು ಎಲ್ಲವೂ ಚಿಣ್ಣರಮಯವಾಗಿತ್ತು.</p>.<p>ಶಾಲಾ ಸಂಸತ್ನ ರಾಷ್ಟ್ರಪತಿ ಪಿ.ವೈಷ್ಣವಿ, ಉಪರಾಷ್ಟ್ರಪತಿ ಎಸ್.ಕೆ.ಸಾಹಿತ್ಯ, ಪ್ರಧಾನ ಮಂತ್ರಿ ಎ.ಎಂ.ವೆಂಕಟಾದ್ರಿಗೌಡ, ಗೃಹ ಮಂತ್ರಿ ಬಿ.ಸುಷ್ಮಾ ವೇದಿಕೆಯಲ್ಲಿ ಅತಿಥಿಗಳಾಗಿದ್ದು, ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆಹರೂ ಕುರಿತು ಮೋನಿಕಾ, ವಿಲಾಸ್ ಮಾತನಾಡಿದರೆ, ಹಂಸವೇಣಿ, ಪಲ್ಲವಿ, ವೈಷ್ಣವಿ ತಂಡದಿಂದ ನೃತ್ಯ ಪ್ರದರ್ಶನ ಮನಸೂರೆಗೊಂಡಿತು.</p>.<p>ಕಾರ್ಯಕ್ರಮದ ಉಸ್ತುವಾರಿಯನ್ನು ಶಾಲಾ ಮಂತ್ರಿ ಮಂಡಳದ ಸ್ವಚ್ಛತಾ ಮಂತ್ರಿ ಎಸ್.ಧನಂಜಯ್, ಆಹಾರ ಮಂತ್ರಿ ಆರ್.ಭವಿಷ್, ಶಿಕ್ಷಣ ಮಂತ್ರಿ ರಾಘವೇಂದ್ರ, ಇತರೆ ಸಚಿವರಾದ ಸಿದ್ದೇಶ್, ಚರಣ್, ಚಂದನಾ, ಹೇಮಲತಾ, ವೇದಾದ್ರಿ, ವಿರೋಧ ಪಕ್ಷದ ನಾಯಕಿ ಪ್ರಿಯಾಂಕಾ, ಅಮೂಲ್ಯ ವಹಿಸಿಕೊಂಡಿದ್ದರು.</p>.<p>ಶಾಲೆಯಲ್ಲಿ ಮಕ್ಕಳಿಗೆ ಪಲಾವ್, ಪಾಯಸ ಸೇರಿದಂತೆ ಸಿಹಿಯೂಟವನ್ನು ಅಡುಗೆ ಸಿಬ್ಬಂದಿ ನೇತ್ರಾವತಿ, ಜಮುನಾ ಬಡಿಸಿದರು. ಶಿಕ್ಷಕರಾದ ವೆಂಕಟರೆಡ್ಡಿ, ಭವಾನಿ, ಶ್ವೇತಾ, ಲೀಲಾ, ಫರೀದಾ, ಚೈತ್ರಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ನೃತ್ಯ, ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸಿ.ಎನ್.ಸಿದ್ದೇಶ್ವರಿ ಮಾತನಾಡಿದರು.</p>.<p>ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಮತ್ತು ರೋಟರಿ ಕೋಲಾರ ನಂದಿನಿ ಆಶ್ರಯದಲ್ಲಿ ತಾಲ್ಲೂಕಿನ ಜಂಗಮಗುರ್ಜೇನಹಳ್ಳಿ ಶಾಲಾ ಮಕ್ಕಳಿಗೆ ಗುಲಾಬಿ ಗಿಡ ವಿತರಿಸಲಾಯಿತು.</p>.<p>‘ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಚರಣೆ ಹಾಗೂ ಮಹಾನ್ ವ್ಯಕ್ತಿಗಳ ವಿಶೇಷ ದಿನಗಳಲ್ಲಿ ಗಿಡಗಳನ್ನು ನೆಡಬೇಕು. ಬಾಲ್ಯದಿಂದಲೇ ಈ ಹವ್ಯಾಸ ರೂಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಆರ್.ಸುರೇಶ್ ತಿಳಿಸಿದರು.</p>.<p>ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ರೋಟರಿ ಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿದರು. ಜಿಲ್ಲಾ ಸಂಘಟಕ ವಿಶ್ವನಾಥ್, ಶಿಕ್ಷಕಿ ವಾಸುವಾಂಭ ಮತ್ತು ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಶಾಲೆಗಳಲ್ಲಿ ಸೋಮವಾರ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.</p>.<p>ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ವೇದಿಕೆಯಲ್ಲಿ ಮಕ್ಕಳೇ ಮುಖ್ಯ ಅತಿಥಿಗಳು, ಉದ್ಘಾಟಕರು, ಭಾಷಣಕಾರರಾಗಿದ್ದು ವಿಶೇಷ.</p>.<p>ಶಿಕ್ಷಕರು ಕೇವಲ ಸ್ವಾಗತಕಾರರು, ನಿರೂಪಕರಾಗಿ ಮಕ್ಕಳಿಗೆ ಮನರಂಜನೆ ನೀಡಿದ್ದು ಎಲ್ಲವೂ ಚಿಣ್ಣರಮಯವಾಗಿತ್ತು.</p>.<p>ಶಾಲಾ ಸಂಸತ್ನ ರಾಷ್ಟ್ರಪತಿ ಪಿ.ವೈಷ್ಣವಿ, ಉಪರಾಷ್ಟ್ರಪತಿ ಎಸ್.ಕೆ.ಸಾಹಿತ್ಯ, ಪ್ರಧಾನ ಮಂತ್ರಿ ಎ.ಎಂ.ವೆಂಕಟಾದ್ರಿಗೌಡ, ಗೃಹ ಮಂತ್ರಿ ಬಿ.ಸುಷ್ಮಾ ವೇದಿಕೆಯಲ್ಲಿ ಅತಿಥಿಗಳಾಗಿದ್ದು, ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆಹರೂ ಕುರಿತು ಮೋನಿಕಾ, ವಿಲಾಸ್ ಮಾತನಾಡಿದರೆ, ಹಂಸವೇಣಿ, ಪಲ್ಲವಿ, ವೈಷ್ಣವಿ ತಂಡದಿಂದ ನೃತ್ಯ ಪ್ರದರ್ಶನ ಮನಸೂರೆಗೊಂಡಿತು.</p>.<p>ಕಾರ್ಯಕ್ರಮದ ಉಸ್ತುವಾರಿಯನ್ನು ಶಾಲಾ ಮಂತ್ರಿ ಮಂಡಳದ ಸ್ವಚ್ಛತಾ ಮಂತ್ರಿ ಎಸ್.ಧನಂಜಯ್, ಆಹಾರ ಮಂತ್ರಿ ಆರ್.ಭವಿಷ್, ಶಿಕ್ಷಣ ಮಂತ್ರಿ ರಾಘವೇಂದ್ರ, ಇತರೆ ಸಚಿವರಾದ ಸಿದ್ದೇಶ್, ಚರಣ್, ಚಂದನಾ, ಹೇಮಲತಾ, ವೇದಾದ್ರಿ, ವಿರೋಧ ಪಕ್ಷದ ನಾಯಕಿ ಪ್ರಿಯಾಂಕಾ, ಅಮೂಲ್ಯ ವಹಿಸಿಕೊಂಡಿದ್ದರು.</p>.<p>ಶಾಲೆಯಲ್ಲಿ ಮಕ್ಕಳಿಗೆ ಪಲಾವ್, ಪಾಯಸ ಸೇರಿದಂತೆ ಸಿಹಿಯೂಟವನ್ನು ಅಡುಗೆ ಸಿಬ್ಬಂದಿ ನೇತ್ರಾವತಿ, ಜಮುನಾ ಬಡಿಸಿದರು. ಶಿಕ್ಷಕರಾದ ವೆಂಕಟರೆಡ್ಡಿ, ಭವಾನಿ, ಶ್ವೇತಾ, ಲೀಲಾ, ಫರೀದಾ, ಚೈತ್ರಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ನೃತ್ಯ, ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸಿ.ಎನ್.ಸಿದ್ದೇಶ್ವರಿ ಮಾತನಾಡಿದರು.</p>.<p>ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಮತ್ತು ರೋಟರಿ ಕೋಲಾರ ನಂದಿನಿ ಆಶ್ರಯದಲ್ಲಿ ತಾಲ್ಲೂಕಿನ ಜಂಗಮಗುರ್ಜೇನಹಳ್ಳಿ ಶಾಲಾ ಮಕ್ಕಳಿಗೆ ಗುಲಾಬಿ ಗಿಡ ವಿತರಿಸಲಾಯಿತು.</p>.<p>‘ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಚರಣೆ ಹಾಗೂ ಮಹಾನ್ ವ್ಯಕ್ತಿಗಳ ವಿಶೇಷ ದಿನಗಳಲ್ಲಿ ಗಿಡಗಳನ್ನು ನೆಡಬೇಕು. ಬಾಲ್ಯದಿಂದಲೇ ಈ ಹವ್ಯಾಸ ರೂಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಆರ್.ಸುರೇಶ್ ತಿಳಿಸಿದರು.</p>.<p>ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ರೋಟರಿ ಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿದರು. ಜಿಲ್ಲಾ ಸಂಘಟಕ ವಿಶ್ವನಾಥ್, ಶಿಕ್ಷಕಿ ವಾಸುವಾಂಭ ಮತ್ತು ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>