ಮತ್ತೊಂದೆಡೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ‘ನನಗೆ ಟಿಕೆಟ್ ನಿರಾಕರಿಸಿದ ಪಕ್ಷದ ನಿರ್ಧಾರದಿಂದ ಬೇಸರವಾಗಿದೆ. 2013 ಮತ್ತು 2018ರ ವಿಧಾನಸಭೆ ಚುನಾವಣೆ ಸೇರಿದಂತೆ ನನಗೆ ಪದೇಪದೇ ಅವಕಾಶ ನಿರಾಕರಿಸಿರುವುದು ಸ್ವಾಭಿಮಾನದ ಪ್ರಶ್ನೆ. ಆತ್ಮಗೌರವ ಕಳೆದುಕೊಂಡು ರಾಜಕಾರಣ ಮಾಡಲ್ಲ’ ಎಂದು ಗುಡುಗಿದ್ದಾರೆ.