‘ಬಂಗಾರಪೇಟೆಯಲ್ಲಿ ಗೆದ್ದಿರುವ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಂಬಂಧಿಸಿದಂತೆ ಮನೆ, ಕಾರಿನಲ್ಲಿ ಹಣ ಸಿಕ್ಕಿದ್ದು, ಚಿಹ್ನೆ, ಲೇಬಲ್, ಊರಿನ ಹೆಸರು ಬರೆದಿದ್ದ ಮಾಹಿತಿ ಲಭ್ಯವಾಗಿದೆ. ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಅವರೂ ಅನರ್ಹರಾಗುತ್ತಾರೆ. ಮಾಲೂರಿನ ನಂಜೇಗೌಡರು ಕಳೆದ ಬಾರಿಗಿಂತ ಈ ಸಲ ಕಡಿಮೆ ಮತ ತೆಗೆದುಕೊಂಡಿದ್ದಾರೆ. ಅವರ ಮೇಲಿರುವ ಪ್ರಕರಣಗಳು ಸಾಬೀತಾದರೆ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ’ ಎಂದರು.