ರಾಮನವಮಿ ಪ್ರಯುಕ್ತ ಜಿಲ್ಲಾ ಕೇಂದ್ರದ ಗಾಂಧಿವನದ ಬಳಿ ಏ.8 ಮತ್ತು ಏ.9ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ, ಹೋಮ, ಮಂಗಳಾರತಿ, ಪ್ರಸಾದ ವಿನಿಯೋಗಕ್ಕೆ ಹಾಗೂ ಏ.10ರಂದು ಬೃಹತ್ ಸಭಾ ಕಾರ್ಯಕ್ರಮ, ಸಂಕೀರ್ತನಾ ಯಾತ್ರೆ, ಬೃಹತ್ ಶೋಭಾ ಯಾತ್ರೆ ನಡೆಸಲು ಅನುಮತಿ ಕೋರಿ ಶ್ರೀರಾಮಸೇನೆ ಸಂಘಟನೆಯ ವಿಭಾಗೀಯ ಅಧ್ಯಕ್ಷ ರಮೇಶ್ರಾಜ್ ಅರಸ್ ಅವರು ನಗರ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರು.