ವಿಜಯ್ದೇವ್ ಅವರು ನಾಗರಿಕರ ಸೇವಾ ಖಾತ್ರಿ ನಿಯಮ 2011ರಡಿ ಸಲ್ಲಿಕೆಯಾದ ಅಟಲ್ಜಿ ಜನಸ್ನೇಹಿ ಕೇಂದ್ರದ (ಎಜೆಎಸ್ಕೆ) ಸೇವೆ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದೆ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ. ಎಜೆಎಸ್ಕೆ ಸೇವೆಗೆ ಸಂಬಂಧಿಸಿದ 43 ಅರ್ಜಿಗಳನ್ನು ಒಂದು ತಿಂಗಳ ನಂತರವೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಯು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.