<p><strong>ಮುಳಬಾಗಿಲು</strong>: ನಗರದ ದ್ರೌಪದಮ್ಮ ವಸಂತೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.</p>.<p>ದ್ರೌಪದಮ್ಮನ 118ನೇ ಕರಗ ಮಹೋತ್ಸವದ ನಂತರದ ಮಾರನೆಯ ದಿನ ನಡೆದ ವಸಂತೋತ್ಸವದಲ್ಲಿ ಕರಗಧಾರಿ ಒನಕೆಯ ಮೇಲೆ ಅರಿಷಿಣ ಮಿಶ್ರಣದ ನೀರಿನ ಬಿಂದಿಗೆಯನ್ನು ಇಟ್ಟುಕೊಂಡು ಮಾಡಿದ ನೃತ್ಯಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.</p>.<p>ಸಂಗೀತ ವಾದ್ಯಗಳ ನಾದಕ್ಕೆ ಅನುಗುಣವಾಗಿ ಹೆಜ್ಜೆಯನ್ನು ಹಾಕುತ್ತಾ ಒನಕೆಯ ಮೇಲಿನ ನೀರನ್ನು ನೃತ್ಯದ ಮೂಲಕವೇ ಹೊರ ಚೆಲ್ಲುತ್ತಾ, ಇಡೀ ಬಿಂದಿಗೆಯಲ್ಲಿದ್ದ ನೀರನ್ನು ಖಾಲಿ ಮಾಡುವ ಮೂಲಕ ನೃತ್ಯ ಮಾಡುತ್ತಾ ನೆರೆದಿದ್ದ ಜನರನ್ನು ಮೋಡಿ ಮಾಡಿದರು.</p>.<p>ನಂತರ ಒಂದರ ಮೇಲೊಂದು ಮೂರು ಬಿಂದಿಗೆಗಳನ್ನು ಒನಕೆಯ ಮೇಲೆ ಕೂರಿಸಿಕೊಂಡು , ಮೂರೂ ಬಿಂದಿಗೆಗಳಲ್ಲಿನ ನೀರು ಹೊರ ಚೆಲ್ಲುವಂತೆ ನೃತ್ಯ ಮಾಡುತ್ತಾ ವಸಂತೋತ್ಸವದ ಜೊತೆಗೆ ಕರಗ ಕಾರ್ಯಕ್ರಮಗಳು ಕೊನೆಗೊಂಡವು.</p>.<p>ವಸಂತೋತ್ಸವದ ಬಳಿಕ ಅರಿಶಿನ ಬಟ್ಟೆಗಳನ್ನು ತೊಟ್ಟಿದ್ದ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಅರಿಶಿಣದ ನೀರನ್ನು ಒಬ್ಬರ ಮೇಲೆ ಒಬ್ಬರು ಬಿಂದಿಗಳಲ್ಲಿ ಎರಚಿಕೊಂಡು ಸಾಂಪ್ರದಾಯಿಕ ಪದ್ಧತಿಯ ಆಚರಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ನಗರದ ದ್ರೌಪದಮ್ಮ ವಸಂತೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.</p>.<p>ದ್ರೌಪದಮ್ಮನ 118ನೇ ಕರಗ ಮಹೋತ್ಸವದ ನಂತರದ ಮಾರನೆಯ ದಿನ ನಡೆದ ವಸಂತೋತ್ಸವದಲ್ಲಿ ಕರಗಧಾರಿ ಒನಕೆಯ ಮೇಲೆ ಅರಿಷಿಣ ಮಿಶ್ರಣದ ನೀರಿನ ಬಿಂದಿಗೆಯನ್ನು ಇಟ್ಟುಕೊಂಡು ಮಾಡಿದ ನೃತ್ಯಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು.</p>.<p>ಸಂಗೀತ ವಾದ್ಯಗಳ ನಾದಕ್ಕೆ ಅನುಗುಣವಾಗಿ ಹೆಜ್ಜೆಯನ್ನು ಹಾಕುತ್ತಾ ಒನಕೆಯ ಮೇಲಿನ ನೀರನ್ನು ನೃತ್ಯದ ಮೂಲಕವೇ ಹೊರ ಚೆಲ್ಲುತ್ತಾ, ಇಡೀ ಬಿಂದಿಗೆಯಲ್ಲಿದ್ದ ನೀರನ್ನು ಖಾಲಿ ಮಾಡುವ ಮೂಲಕ ನೃತ್ಯ ಮಾಡುತ್ತಾ ನೆರೆದಿದ್ದ ಜನರನ್ನು ಮೋಡಿ ಮಾಡಿದರು.</p>.<p>ನಂತರ ಒಂದರ ಮೇಲೊಂದು ಮೂರು ಬಿಂದಿಗೆಗಳನ್ನು ಒನಕೆಯ ಮೇಲೆ ಕೂರಿಸಿಕೊಂಡು , ಮೂರೂ ಬಿಂದಿಗೆಗಳಲ್ಲಿನ ನೀರು ಹೊರ ಚೆಲ್ಲುವಂತೆ ನೃತ್ಯ ಮಾಡುತ್ತಾ ವಸಂತೋತ್ಸವದ ಜೊತೆಗೆ ಕರಗ ಕಾರ್ಯಕ್ರಮಗಳು ಕೊನೆಗೊಂಡವು.</p>.<p>ವಸಂತೋತ್ಸವದ ಬಳಿಕ ಅರಿಶಿನ ಬಟ್ಟೆಗಳನ್ನು ತೊಟ್ಟಿದ್ದ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಅರಿಶಿಣದ ನೀರನ್ನು ಒಬ್ಬರ ಮೇಲೆ ಒಬ್ಬರು ಬಿಂದಿಗಳಲ್ಲಿ ಎರಚಿಕೊಂಡು ಸಾಂಪ್ರದಾಯಿಕ ಪದ್ಧತಿಯ ಆಚರಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>