<p><strong>ಬಂಗಾರಪೇಟೆ: </strong>ತಾಲ್ಲೂಕಿನ ಜನರು ಒಂದೆಡೆ ಕೊರೊನಾ ಸೋಂಕಿಗೆ ತತ್ತರಿಸಿದರೆ, ಮತ್ತೊಂದೆಡೆ ಅರಣ್ಯದ ಅಂಚಿನ ಗ್ರಾಮಸ್ಥರು ಆನೆದಾಳಿ ಭೀತಿಯಲ್ಲೇ ಜೀವನ ದೂಡುವಂತಾಗಿದೆ.</p>.<p>ಸುಮಾರು ಆರು ತಿಂಗಳಿಂದ ತಾಲ್ಲೂಕಿನ ದೋಣಿಮೊಡುಗು, ತೊಪ್ಪನಹಳ್ಳಿ, ಬಲಮಂದೆ, ಗುಲ್ಲಹಳ್ಳಿ, ಬೂದಿಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆನೆ ಹಿಂಡು ರೈತರ ಅಪಾರ ಬೆಳೆ ನಷ್ಟ ಮಾಡಿದೆ.<br />ದೋಣಿಮೊಡಗು ಪಂಚಾಯಿತಿ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ಸೀತಬೈರಪ್ಪ ಅವರ ಟೊಮೆಟೊ ತೋಟಕ್ಕೆ ಬುಧವಾರ ರಾತ್ರಿ ದಾಳಿಯಿಟ್ಟಿರುವ ಆನೆಗಳು ಫಸಲಿಗೆ ಬಂದಿರುವ ತೋಟವನ್ನು ಸಂಪೂರ್ಣವಾಗಿ ನಾಶಪಡಿಸಿವೆ.</p>.<p>‘ಸತತವಾಗಿ ಐದು ಬಾರಿ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳು ಸಂಪೂರ್ಣವಾಗಿ ನಾಶಮಾಡಿವೆ. ಲಕ್ಷಾಂತರ ಖರ್ಚು ಮಾಡಿ ಬೆಳೆಸಿದ್ದೆಲ್ಲ ರಾತ್ರೋರಾತ್ರಿ ನೆಲಕಚ್ಚಿದೆ. ಸುಮಾರು 2 ಲಕ್ಷ ನಷ್ಟವಾಗಿದೆ. ಇದಕ್ಕೆ ಯಾರು ಹೊಣೆ' ಎಂದು ಬೈರಪ್ಪ ಪ್ರಶ್ನಿಸಿದರು.</p>.<p>‘ಅರಣ್ಯ ಇಲಾಖೆ ಸಿಬ್ಬಂದಿ ಇದ್ದರೂ ಯಾವುದೇ ಪ್ರಯೋಜನವಿಲ್ಲ. ದಾಳಿ ಮಾಡಿದ ಮೇಲೆ ಸ್ಥಳಕ್ಕೆ ಬರತ್ತಾರೆಯೇ ವಿನಹ ಕಾಡಿನಿಂದ ಹೊರಗೆ ಬರದಂತೆ ತಡೆಯಲು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.</p>.<p>ಬೆಳೆ ಹಾನಿ ಅಲ್ಲದೆ ಪ್ರಾಣಹಾನಿ ಕೂಡ ಸಂಭವಿಸಿದೆ. ಇದುವರೆಗೂ ಸುಮಾರು 15ಕ್ಕೂ ಹೆಚ್ಚು ಜನರು ಆನೆದಾಳಿಗೆ ಬಲಿಯಾಗಿದ್ದಾರೆ. ರಾತ್ರಿವೇಳೆ ತೋಟದ ಬಳಿ ತೆರಳಲು ಭಯವಾಗುತ್ತೆ. ಎಲ್ಲಿ ಯಾವಗ ಆನೆಗಳು ಎದುರಾಗುವುದೋ ಎನ್ನುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ರೈತ ವೆಂಕಟೇಶಪ್ಪ.</p>.<p>ದಶಕದಿಂದ ಈ ಭಾಗದಲ್ಲಿ ಆನೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಆರಂಭದಲ್ಲಿ ವರ್ಷಕ್ಕೆ ನಾಲ್ಕೈದು ಬಾರಿ ಇತ್ತ ಸಂಚರಿಸುತ್ತಿದ್ದ ಆನೆಗಳು ಆರು ತಿಂಗಳಿಂದ ಇಲ್ಲೇ ನೆಲೆಯೂರಿವೆ.</p>.<p>ಕನಮನಹಳ್ಳಿ ಸಮೀಪ ಗಡಿಯೊಳಕ್ಕೆ ನುಸಳುವ ಆನೆಗಳು ಯರಗೋಳ್, ಬಲಮಂದೆ, ಮೂತನೂರು, ತೊಪ್ಪನಹಳ್ಳಿ ಬೋಡಪಟ್ಟಿ, ಕೆಜಿಎಫ್ ಮೂಲಕ ವಿಕೋಟೆಯತ್ತ ಸಂಚರಿಸುತ್ತವೆ. ಪ್ರತಿಬಾರಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮಾರ್ಗಮಧ್ಯದಲ್ಲಿ ಸಿಗುವ ಅಪಾರ ಬೆಳೆ ನಾಶ ಮಾಡುತ್ತಿವೆ.</p>.<p>ಅರಣ್ಯ ಇಲಾಖೆ ಕೂಡ ಈ ಮಾರ್ಗವನ್ನು ಆನೆ ಕಾರಿಡಾರ್ ಎಂದು ಗುರುತಿಸಿದೆ. ಅಲ್ಲದೆ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ಸರ್ಕಾರ ವನ್ಯಜೀವಿಧಾಮ ಎಂದು ಘೋಷಿಸಿದೆ.</p>.<p>'ವನ್ಯಜೀವಿ ಧಾಮ' ಆದಲ್ಲಿ ಪ್ರಾಣಿಗಳ ಪೋಷಣೆ ಮತ್ತು ಜನರ ಹಾಗೂ ಬೆಳೆ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಈ ಭಾಗದ ರೈತರ ಆರೋಪ.</p>.<p>ಆನೆದಾಳಿ ತಡೆಯಬೇಕು ಎಂದು ಈಚೆಗೆ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ಪ್ರತಿಭಟನೆ ಹಮ್ಮಿ<br />ಕೊಂಡಿದ್ದೆವು. ಪ್ರತಿಭಟನೆಗೆ ಮುನ್ನವೇ ರೈತ ಮುಖಂಡರ ಬಳಿ ಧಾವಿಸಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೀತಭೈರಪ್ಪ ದೂರಿದರು.</p>.<p>'ಆನೆದಾಳಿಯಿಂದ ಜೀವನವಿಡೀ ಭೀತಿಯಲ್ಲೇ ಜೀವನ ದೂಡುವಂತಾಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರುತ್ತಿಲ್ಲ. ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ: </strong>ತಾಲ್ಲೂಕಿನ ಜನರು ಒಂದೆಡೆ ಕೊರೊನಾ ಸೋಂಕಿಗೆ ತತ್ತರಿಸಿದರೆ, ಮತ್ತೊಂದೆಡೆ ಅರಣ್ಯದ ಅಂಚಿನ ಗ್ರಾಮಸ್ಥರು ಆನೆದಾಳಿ ಭೀತಿಯಲ್ಲೇ ಜೀವನ ದೂಡುವಂತಾಗಿದೆ.</p>.<p>ಸುಮಾರು ಆರು ತಿಂಗಳಿಂದ ತಾಲ್ಲೂಕಿನ ದೋಣಿಮೊಡುಗು, ತೊಪ್ಪನಹಳ್ಳಿ, ಬಲಮಂದೆ, ಗುಲ್ಲಹಳ್ಳಿ, ಬೂದಿಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆನೆ ಹಿಂಡು ರೈತರ ಅಪಾರ ಬೆಳೆ ನಷ್ಟ ಮಾಡಿದೆ.<br />ದೋಣಿಮೊಡಗು ಪಂಚಾಯಿತಿ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ಸೀತಬೈರಪ್ಪ ಅವರ ಟೊಮೆಟೊ ತೋಟಕ್ಕೆ ಬುಧವಾರ ರಾತ್ರಿ ದಾಳಿಯಿಟ್ಟಿರುವ ಆನೆಗಳು ಫಸಲಿಗೆ ಬಂದಿರುವ ತೋಟವನ್ನು ಸಂಪೂರ್ಣವಾಗಿ ನಾಶಪಡಿಸಿವೆ.</p>.<p>‘ಸತತವಾಗಿ ಐದು ಬಾರಿ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳು ಸಂಪೂರ್ಣವಾಗಿ ನಾಶಮಾಡಿವೆ. ಲಕ್ಷಾಂತರ ಖರ್ಚು ಮಾಡಿ ಬೆಳೆಸಿದ್ದೆಲ್ಲ ರಾತ್ರೋರಾತ್ರಿ ನೆಲಕಚ್ಚಿದೆ. ಸುಮಾರು 2 ಲಕ್ಷ ನಷ್ಟವಾಗಿದೆ. ಇದಕ್ಕೆ ಯಾರು ಹೊಣೆ' ಎಂದು ಬೈರಪ್ಪ ಪ್ರಶ್ನಿಸಿದರು.</p>.<p>‘ಅರಣ್ಯ ಇಲಾಖೆ ಸಿಬ್ಬಂದಿ ಇದ್ದರೂ ಯಾವುದೇ ಪ್ರಯೋಜನವಿಲ್ಲ. ದಾಳಿ ಮಾಡಿದ ಮೇಲೆ ಸ್ಥಳಕ್ಕೆ ಬರತ್ತಾರೆಯೇ ವಿನಹ ಕಾಡಿನಿಂದ ಹೊರಗೆ ಬರದಂತೆ ತಡೆಯಲು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.</p>.<p>ಬೆಳೆ ಹಾನಿ ಅಲ್ಲದೆ ಪ್ರಾಣಹಾನಿ ಕೂಡ ಸಂಭವಿಸಿದೆ. ಇದುವರೆಗೂ ಸುಮಾರು 15ಕ್ಕೂ ಹೆಚ್ಚು ಜನರು ಆನೆದಾಳಿಗೆ ಬಲಿಯಾಗಿದ್ದಾರೆ. ರಾತ್ರಿವೇಳೆ ತೋಟದ ಬಳಿ ತೆರಳಲು ಭಯವಾಗುತ್ತೆ. ಎಲ್ಲಿ ಯಾವಗ ಆನೆಗಳು ಎದುರಾಗುವುದೋ ಎನ್ನುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ರೈತ ವೆಂಕಟೇಶಪ್ಪ.</p>.<p>ದಶಕದಿಂದ ಈ ಭಾಗದಲ್ಲಿ ಆನೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಆರಂಭದಲ್ಲಿ ವರ್ಷಕ್ಕೆ ನಾಲ್ಕೈದು ಬಾರಿ ಇತ್ತ ಸಂಚರಿಸುತ್ತಿದ್ದ ಆನೆಗಳು ಆರು ತಿಂಗಳಿಂದ ಇಲ್ಲೇ ನೆಲೆಯೂರಿವೆ.</p>.<p>ಕನಮನಹಳ್ಳಿ ಸಮೀಪ ಗಡಿಯೊಳಕ್ಕೆ ನುಸಳುವ ಆನೆಗಳು ಯರಗೋಳ್, ಬಲಮಂದೆ, ಮೂತನೂರು, ತೊಪ್ಪನಹಳ್ಳಿ ಬೋಡಪಟ್ಟಿ, ಕೆಜಿಎಫ್ ಮೂಲಕ ವಿಕೋಟೆಯತ್ತ ಸಂಚರಿಸುತ್ತವೆ. ಪ್ರತಿಬಾರಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮಾರ್ಗಮಧ್ಯದಲ್ಲಿ ಸಿಗುವ ಅಪಾರ ಬೆಳೆ ನಾಶ ಮಾಡುತ್ತಿವೆ.</p>.<p>ಅರಣ್ಯ ಇಲಾಖೆ ಕೂಡ ಈ ಮಾರ್ಗವನ್ನು ಆನೆ ಕಾರಿಡಾರ್ ಎಂದು ಗುರುತಿಸಿದೆ. ಅಲ್ಲದೆ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ಸರ್ಕಾರ ವನ್ಯಜೀವಿಧಾಮ ಎಂದು ಘೋಷಿಸಿದೆ.</p>.<p>'ವನ್ಯಜೀವಿ ಧಾಮ' ಆದಲ್ಲಿ ಪ್ರಾಣಿಗಳ ಪೋಷಣೆ ಮತ್ತು ಜನರ ಹಾಗೂ ಬೆಳೆ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಈ ಭಾಗದ ರೈತರ ಆರೋಪ.</p>.<p>ಆನೆದಾಳಿ ತಡೆಯಬೇಕು ಎಂದು ಈಚೆಗೆ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ಪ್ರತಿಭಟನೆ ಹಮ್ಮಿ<br />ಕೊಂಡಿದ್ದೆವು. ಪ್ರತಿಭಟನೆಗೆ ಮುನ್ನವೇ ರೈತ ಮುಖಂಡರ ಬಳಿ ಧಾವಿಸಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೀತಭೈರಪ್ಪ ದೂರಿದರು.</p>.<p>'ಆನೆದಾಳಿಯಿಂದ ಜೀವನವಿಡೀ ಭೀತಿಯಲ್ಲೇ ಜೀವನ ದೂಡುವಂತಾಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರುತ್ತಿಲ್ಲ. ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>