ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ವೃಷಭಾವತಿ ಕೆರೆಯಲ್ಲಿ ತಂದೆ ಮಗಳು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಸಯ್ಯದ್ ಅಯೂಬ್ (35) ಹಾಗೂ ಪುತ್ರಿ ಫಾತಿಮಾ (10) ಕೆರೆಯಲ್ಲಿ ಸೆಲ್ಪಿ ತೆಗೆಸಿಕೊಳ್ಳಲು ಹೋದ ಸಂದರ್ಭದಲ್ಲಿ ಜಾರಿ ಬಿದ್ದಿದ್ದಾರೆ. ಮಜರಗೋಲ್ಲಹಳ್ಳಿ ಇಂತಿಯಾಜ್ ಅವರ ಮನೆಗೆ ಪತ್ನಿ ಆಯಿಷಾ ಜತೆ ಸಯ್ಯದ್ ಅಯೂಬ್ ಅತಿಥಿಯಾಗಿ ಬಂದಿದ್ದರು.