<p><strong>ಕೆಜಿಎಫ್: </strong>ನಗರದ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್ನಿಂದ ಹಣ ತೆಗೆದುಕೊಂಡು ಎಟಿಎಂಗಳಿಗೆ ತುಂಬಲು ಹೋಗಿದ್ದ ಇಬ್ಬರು ನೌಕರರು ₹ 5 ಲಕ್ಷ ವಂಚಿಸಿದ್ದಾರೆ ಎಂದು ರೂಟ್ ಲೀಡರ್ ಮಹೇಂದ್ರ ಎಂಬುವರು ಆಂಡರಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ಏಪ್ರಿಲ್ 12ರಂದು ರಾಬರ್ಟಸನ್ಪೇಟೆಯ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್ನಿಂದ ₹ 5.76 ಕೋಟಿಯನ್ನು ರೈಟರ್ ಬಿಸಿನೆಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ನ ಮಧುಚಂದ್ರ ಮತ್ತು ಉದಯಕುಮಾರ್ ವಾಹನದಲ್ಲಿ ತುಂಬಿಕೊಂಡರು. ಅದನ್ನು ಎಲ್ಲಾ ಎಟಿಎಂಗಳಿಗೆ ತುಂಬುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಇಬ್ಬರೂ ಎಲ್ಲಾ ಎಟಿಎಂಗಳಿಗೆ ಹಣ ತುಂಬಿದ್ದಾರೆ.</p>.<p>ಕೊನೆಯದಾಗಿ ಕ್ಯಾಸಂಬಳ್ಳಿಯ ಎಟಿಎಂನಲ್ಲಿ ಹಣ ತುಂಬುವಾಗ ₹ 25 ಲಕ್ಷ ಜಮಾ ಮಾಡುವ ಬದಲು ಕೇವಲ ₹ 20 ಲಕ್ಷ ಜಮಾ ಮಾಡಿದ್ದಾರೆ. ಇಬ್ಬರು ಸಿಬ್ಬಂದಿ ಕಂಪನಿಗೆ ₹ 5 ಲಕ್ಷ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಆಂಡರಸನ್ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್: </strong>ನಗರದ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್ನಿಂದ ಹಣ ತೆಗೆದುಕೊಂಡು ಎಟಿಎಂಗಳಿಗೆ ತುಂಬಲು ಹೋಗಿದ್ದ ಇಬ್ಬರು ನೌಕರರು ₹ 5 ಲಕ್ಷ ವಂಚಿಸಿದ್ದಾರೆ ಎಂದು ರೂಟ್ ಲೀಡರ್ ಮಹೇಂದ್ರ ಎಂಬುವರು ಆಂಡರಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ಏಪ್ರಿಲ್ 12ರಂದು ರಾಬರ್ಟಸನ್ಪೇಟೆಯ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್ನಿಂದ ₹ 5.76 ಕೋಟಿಯನ್ನು ರೈಟರ್ ಬಿಸಿನೆಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ನ ಮಧುಚಂದ್ರ ಮತ್ತು ಉದಯಕುಮಾರ್ ವಾಹನದಲ್ಲಿ ತುಂಬಿಕೊಂಡರು. ಅದನ್ನು ಎಲ್ಲಾ ಎಟಿಎಂಗಳಿಗೆ ತುಂಬುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಇಬ್ಬರೂ ಎಲ್ಲಾ ಎಟಿಎಂಗಳಿಗೆ ಹಣ ತುಂಬಿದ್ದಾರೆ.</p>.<p>ಕೊನೆಯದಾಗಿ ಕ್ಯಾಸಂಬಳ್ಳಿಯ ಎಟಿಎಂನಲ್ಲಿ ಹಣ ತುಂಬುವಾಗ ₹ 25 ಲಕ್ಷ ಜಮಾ ಮಾಡುವ ಬದಲು ಕೇವಲ ₹ 20 ಲಕ್ಷ ಜಮಾ ಮಾಡಿದ್ದಾರೆ. ಇಬ್ಬರು ಸಿಬ್ಬಂದಿ ಕಂಪನಿಗೆ ₹ 5 ಲಕ್ಷ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಆಂಡರಸನ್ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>