ಕೋಲಾರ: ‘ದೇಶದ ಭವಿಷ್ಯವಾಗಿರುವ ಮಕ್ಕಳ ಆರೋಗ್ಯ ಕಾಪಾಡುವ ಉದ್ದೇದಿಂದ ಲಸಿಕಾ ಅಭಿಯಾನ ನಡೆಸುತ್ತಿದ್ದು, ಪೋಷಕರು ತಪ್ಪದೆ 5 ವರ್ಷದೊಳಿಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ಶಸ್ತ್ರಚಿಕಿತ್ಸಾಕ ಡಾ.ಎಸ್.ಜಿ.ನಾರಾಯಣಸ್ವಾಮಿ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾ ಎಸ್ಎನ್ಆರ್ ಸ್ಪತ್ರೆಯಲ್ಲಿ ಭಾನುವಾರ 2020ನೇ ಸಾಲಿನ ಮೊದಲನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಆರೋಗ್ಯ ಇಲಾಖೆಯಿಂದ ಲಸಿಕೆ ಅಭಿಯಾನದ ನಡೆಸಲಾಗುತ್ತಿದೆ ಎಂದರೆ ವದಂತಿಗಳನ್ನು ಹಬ್ಬಿಸುವವರು ಹೆಚ್ಚಾಗಿರುತ್ತಾರೆ’ ಇದಕ್ಕೆ ಯಾರು ಕಿವಿಗೋಡಬಾರದು’ ಎಂದರು.
‘ಗ್ರಾಮಗಳ ಶಾಲೆಗಳಲ್ಲಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಕೊಳಚೆ ಪ್ರದೇಶ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಪೋಲಿಯೊ ಅಭಿಯಾನ ನಡೆಸುತ್ತಿದ್ದು, ಸಾರ್ವಜನಿರು ಇದರ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಕೋರಿದರು.
ವೈದ್ಯರಾದ ಡಾ.ಆಶಾ, ಡಾ.ನಂದೀಶ್, ಡಾ.ಮಂಜುನಾಥ್, ರೋಟರಿ ಸಂಸ್ಥೆ ಅಧ್ಯಕ್ಷ ವೆಂಕಟರಮಣ, ಕಾರ್ಯದರ್ಶಿಗಳಾದ ಕೆ.ಎಸ್.ಸೋಮಶೇಖರ್, ಬಾಲಾಜಿ ಹಾಜರಿದ್ದರು.