ಗೋಡಂಬಿ ಬೆಳೆಯಲ್ಲಿ ಸಸ್ಯಾಭಿವೃದ್ಧಿ ವಿಧಾನಗಳು, ಸಂಕರಣ ತಳಿಗಳು ಮತ್ತು ಮೈದಾನ ಪ್ರದೇಶಕ್ಕೆ ಸೂಕ್ತವಾದ ತಳಿಗಳ ಬಗ್ಗೆ ಡಾ.ಆರ್.ಕೆ. ರಾಮಚಂದ್ರ ವಿವರಿಸಿದರು. ಸಮಗ್ರ ಬೇಸಾಯ ತಂತ್ರಜ್ಞಾನದ ಬಗ್ಗೆ ಬಿ.ಎನ್. ರಾಜೇಂದ್ರ, ಸಸ್ಯ ಸಂರಕ್ಷಣೆ ಕುರಿತು ಡಾ ಬಿ. ಆಂಜನೇಯರೆಡ್ಡಿ, ಕೊಯ್ಲೋತ್ತರ ತಂತ್ರಜ್ಞಾನ ಕುರಿತು ಎಂ. ರಮೇಶ್, ಸಂರಕ್ಷಣೆ ಮತ್ತು ಮಾರುಕಟ್ಟೆ ಕುರಿತು ಡಾ.ಬಿ. ಸುಬ್ರಮಣ್ಯಂ
ಮಾತನಾಡಿದರು.