<p><strong>ಮುಳಬಾಗಿಲು:</strong> ಆದಿನಾರಾಯಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬುಧವಾರ ನಗರದ ಹೊರವಲಯದ ಬಾಲಾಜಿ ಭವನ ಬಳಿಯ ಮೈದಾನದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉಚಿತ 25 ಸಾವಿರ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು.</p>.<p>ಹೆಲ್ಮೆಟ್ ವಿತರಣೆ ಕುರಿತು ತಾಲ್ಲೂಕಿನಾದ್ಯಂತ ಪ್ರಚಾರ ನಡೆಸಿದ ಹಿನ್ನೆಲೆ ಸಾವಿರಾರು ಮಂದಿ ಹೆಲ್ಮೆಟ್ ಪಡೆಯಲು ಜಮಾಯಿಸಿದ್ದರು. ಸುಸಜ್ಜಿತ ಬ್ಯಾರಿಕೇಡ್ ಸಹ ನಿರ್ಮಿಸಲಾಗಿತ್ತು. ಆದರೆ, ವಾಹನಗಳು ಹೆಚ್ಚಾಗಿದ್ದ ಕಾರಣ 2 ರಿಂದ 3 ಸಾವಿರ ಮಂದಿಗೆ ಹೆಲ್ಮೆಟ್ ಸಿಗಲಿಲ್ಲ. ಹಾಗಾಗಿ ಹೆಲ್ಮೆಟ್ ತುಂಬಿದ ಟೆಂಪೊಗಳ ಮುಂದೆ ಬಳಿ ನೂರಾರು ಮಂದಿ ಏಕಾಏಕಿ ಜಮಾಯಿಸಿ ಹೆಲ್ಮೆಟ್ ಪಡೆಯಲು ಮುಂದಾದರು. </p>.<p>ಹೆಲ್ಮೆಟ್ ಸಿಗದವರು ಏಕಾಏಕಿ ಹೆಲ್ಮೆಟ್ ತುಂಬಿದ್ದ ವಾಹನಗಳ ಒಳಗೆ ಹತ್ತಿ ನಾಲ್ಕೈದು ಹೆಲ್ಮೆಟ್ ತೆಗೆದುಕೊಂಡರು. ಇದರಿಂದ ನೂಕು ನುಗ್ಗಲು ಹೆಚ್ಚಾಗಿ ಪೊಲೀಸರು ವಾಹನ ಸವಾರರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕೆಲವರು ಹೆಲ್ಮೆಟ್ ಸಿಗದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ವಿ.ಆದಿನಾರಾಯಣ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಸಹ ತಾಲ್ಲೂಕಿನಲ್ಲಿ ಜನರ ಸೇವೆಯಲ್ಲಿ ತೊಡಗಿದ್ದಾರೆ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ವಿ.ಆದಿನಾರಾಯಣ, ಮುನಿ ಆಂಜಿನಪ್ಪ, ರಾಮಲಿಂಗ ರೆಡ್ಡಿ, ರಾಜೇಂದ್ರ ಗೌಡ, ಅಮಾನುಲ್ಲಾ, ಉಮಾಶಂಕರ್ ಹಾಗೂ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ಆದಿನಾರಾಯಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬುಧವಾರ ನಗರದ ಹೊರವಲಯದ ಬಾಲಾಜಿ ಭವನ ಬಳಿಯ ಮೈದಾನದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉಚಿತ 25 ಸಾವಿರ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು.</p>.<p>ಹೆಲ್ಮೆಟ್ ವಿತರಣೆ ಕುರಿತು ತಾಲ್ಲೂಕಿನಾದ್ಯಂತ ಪ್ರಚಾರ ನಡೆಸಿದ ಹಿನ್ನೆಲೆ ಸಾವಿರಾರು ಮಂದಿ ಹೆಲ್ಮೆಟ್ ಪಡೆಯಲು ಜಮಾಯಿಸಿದ್ದರು. ಸುಸಜ್ಜಿತ ಬ್ಯಾರಿಕೇಡ್ ಸಹ ನಿರ್ಮಿಸಲಾಗಿತ್ತು. ಆದರೆ, ವಾಹನಗಳು ಹೆಚ್ಚಾಗಿದ್ದ ಕಾರಣ 2 ರಿಂದ 3 ಸಾವಿರ ಮಂದಿಗೆ ಹೆಲ್ಮೆಟ್ ಸಿಗಲಿಲ್ಲ. ಹಾಗಾಗಿ ಹೆಲ್ಮೆಟ್ ತುಂಬಿದ ಟೆಂಪೊಗಳ ಮುಂದೆ ಬಳಿ ನೂರಾರು ಮಂದಿ ಏಕಾಏಕಿ ಜಮಾಯಿಸಿ ಹೆಲ್ಮೆಟ್ ಪಡೆಯಲು ಮುಂದಾದರು. </p>.<p>ಹೆಲ್ಮೆಟ್ ಸಿಗದವರು ಏಕಾಏಕಿ ಹೆಲ್ಮೆಟ್ ತುಂಬಿದ್ದ ವಾಹನಗಳ ಒಳಗೆ ಹತ್ತಿ ನಾಲ್ಕೈದು ಹೆಲ್ಮೆಟ್ ತೆಗೆದುಕೊಂಡರು. ಇದರಿಂದ ನೂಕು ನುಗ್ಗಲು ಹೆಚ್ಚಾಗಿ ಪೊಲೀಸರು ವಾಹನ ಸವಾರರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕೆಲವರು ಹೆಲ್ಮೆಟ್ ಸಿಗದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ವಿ.ಆದಿನಾರಾಯಣ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಸಹ ತಾಲ್ಲೂಕಿನಲ್ಲಿ ಜನರ ಸೇವೆಯಲ್ಲಿ ತೊಡಗಿದ್ದಾರೆ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ವಿ.ಆದಿನಾರಾಯಣ, ಮುನಿ ಆಂಜಿನಪ್ಪ, ರಾಮಲಿಂಗ ರೆಡ್ಡಿ, ರಾಜೇಂದ್ರ ಗೌಡ, ಅಮಾನುಲ್ಲಾ, ಉಮಾಶಂಕರ್ ಹಾಗೂ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>