ಮಾನವ ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಅರಣ್ಯದಲ್ಲಿ ಪ್ರಾಣಿಗಳಿಗೆ ಮೇವು ನೀರಿನ ವ್ಯವಸ್ಥೆ ಮಾಡಬೇಕು. ಜತೆಗೆ ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಜನ ಜಾಗೃತಿ ಮೂಡಿಸಬೇಕು
ಬಿ.ಕೆ.ಮಂಜುನಾಥ ಬಲಮಂದೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು
ರೈತರು ಎಚ್ಚರದಿಂದ ಇರಬೇಕು
ಆನೆಗಳು ಅತ್ಯಂತ ವೇಗವಾಗಿ ಓಡುವ ಆಕ್ರಮಣಕಾರಿ ಜೀವಿಗಳು. ಪ್ರಚೋದನೆಗೆ ಒಳಗಾದ ಯಾವುದೇ ವನ್ಯಜೀವಿಗಳು ತಮ್ಮ ಆತ್ಮರಕ್ಷಣೆಗಾಗಿ ದಾಳಿ ನಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವನ್ಯಜೀವಿಗಳಿಂದ ಯಾವಾಗಲೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಅತಿಮುಖ್ಯ. ಆನೆ ದಾಳಿಯಿಂದ ಮೃತಪಟ್ಟ ರೈತರಲ್ಲಿ ಶೇಕಡ 95ರಷ್ಟು ರೈತರ ಮೇಲೆ ಮುಂಜಾನೆಯೇ ದಾಳಿ ನಡೆಸಿವೆ. ಅವು ಮುಂಜಾನೆ 4 ರಿಂದ 6 ಗಂಟೆ ಸಮಯದಲ್ಲಿ ಆನೆಗಳು ಕಾಡಿಗೆ ಹಿಂದಿರುಗುವ ಸಮಯ. ಆ ವೇಳೆ ಅಡ್ಡ ಬಂದವರ ಮೇಲೆ ಪ್ರಾಣ ರಕ್ಷಣೆಗಾಗಿ ದಾಳಿ ಮಾಡುತ್ತವೆ. ಆ ಸಮಯದಲ್ಲಿ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ವೇಣು ಅವರ ಮಾತಾಗಿದೆ.