<p><strong>ಕೋಲಾರ:</strong> ‘ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್) ಜುಲೈ 31ರೊಳಗೆ ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿ ಮೂಲಕ ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.</p>.<p>ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಅನುಷ್ಠಾನದ ಗುತ್ತಿಗೆ ಪಡೆದಿರುವ ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳೊಂದಿಗೆ ಇಲ್ಲಿ ಶುಕ್ರವಾರ ಆನ್ಲೈನ್ ಮೂಲಕ ಸಭೆ ನಡೆಸಿದ ಅವರು, ‘ದೇಶದಲ್ಲೇ ಮಾದರಿ ವ್ಯವಸ್ಥೆಯಾಗಿಸುವ ನಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಕೆಲಸ ಮಾಡಿ’ ಎಂದರು.</p>.<p>‘ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿಯು ನಮ್ಮ ಹಾಗೂ ಆಡಳಿತ ಮಂಡಳಿಯ ಕನಸಾಗಿದೆ. ಇದಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ 188 ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸಿಇಒಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.</p>.<p>‘ಸಹಕಾರಿ ವ್ಯವಸ್ಥೆ ಕುರಿತು ನಂಬಿಕೆ ಮತ್ತಷ್ಟು ಬಲಗೊಳ್ಳಲು ಗಣಕೀಕೃತ ಲೆಕ್ಕಪರಿಶೋಧನೆಯು ಅತಿ ಮುಖ್ಯ ಹಂತ. ಇದರಿಂದ ಗ್ರಾಹಕರಲ್ಲಿ ವಿಶ್ವಾಸ ವೃದ್ಧಿಯಾಗುವುದರ ಜತೆಗೆ ಅಂದಿನ ವಹಿವಾಟಿನ ಲೆಕ್ಕ ಅಂದೇ ಆನ್ಲೈನ್ನಲ್ಲಿ ದಾಖಲಾಗುವ ಮೂಲಕ ಆರ್ಥಿಕ ಅಪರಾಧ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>ಜುಲೈ ಗಡುವು: ‘ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನದಲ್ಲಿ ವಿ-ಸಾಫ್ಟ್ ಸಂಸ್ಥೆ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸರಿಯಲ್ಲ. ಜುಲೈ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲೇಬೇಕು. ಪ್ರತಿ 15 ಸೊಸೈಟಿಗಳಿಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.</p>.<p>‘ಅವಿಭಜಿತ ಜಿಲ್ಲೆಯ 188 ಪ್ಯಾಕ್ಸ್ಗಳ ಪೈಕಿ ಈಗಾಗಲೇ 21 ಸೊಸೈಟಿಗಳಲ್ಲಿ ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನ ಮುಗಿದಿದೆ. 41 ಸೊಸೈಟಿಗಳಲ್ಲಿ ಈ ಕಾರ್ಯ ಮುಕ್ತಾಯದ ಹಂತದಲ್ಲಿದೆ. 26 ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಗಣಕೀಕೃತ ಲೆಕ್ಕಪರಿಶೋಧನೆ ಜಾರಿಯಲ್ಲಿ ವಿಫಲವಾಗುವ ಯಾವುದೇ ಪ್ಯಾಕ್ಸ್ಗೆ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡುವುದಿಲ್ಲ. ಸಹಕಾರಿ ವ್ಯವಸ್ಥೆ ಬಲಗೊಳಿಸಿ ಪಾರದರ್ಶಕ ವ್ಯವಸ್ಥೆಯಲ್ಲಿ ಜನರ ನಂಬಿಕೆ ಉಳಿಸಿಕೊಳ್ಳಲು ಈ ಕಾರ್ಯ ಆಗಲೇಬೇಕು’ ಎಂದು ಹೇಳಿದರು.</p>.<p><strong>ಬದ್ಧತೆಯಿದೆ:</strong> ಆನ್ಲೈನ್ ಮೂಲಕ ಸಭೆಯಲ್ಲಿ ಭಾಗಿಯಾದ ವಿ-ಸಾಫ್ಟ್ ಸಂಸ್ಥೆ ಮುಖ್ಯಾಧಿಕಾರಿ ಸಿರೀಶ್, ‘ನಿಮ್ಮ ಸಂಕಲ್ಪಕ್ಕೆ ನಮ್ಮ ಬದ್ಧತೆಯಿದೆ. ಜುಲೈ 31ರೊಳಗೆ ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನ ಪೂರ್ಣಗೊಳಿಸುತ್ತೇವೆ. ಈ ಕಾರ್ಯಕ್ಕೆ ಹೆಚ್ಚಿನ ನುರಿತ ಸಿಬ್ಬಂದಿ ನಿಯೋಜಿಸುತ್ತೇವೆ. ಶನಿವಾರ ಹಾಗೂ ಭಾನುವಾರ ಸಹ ಕೆಲಸ ಮಾಡುತ್ತೇವೆ’ ಎಂದರು.</p>.<p>‘ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಅನುಷ್ಠಾನದಲ್ಲಿ ತೀವ್ರ ಹಿನ್ನಡೆ ಹೊಂದಿರುವ ಸಹಕಾರ ಸಂಘಗಳ ಮಾಹಿತಿ ಕೊಡಿ. ಕೋಲಾರ ತಾಲ್ಲೂಕಿನ ಹುತ್ತೂರು, ಕಸಬಾ ದಕ್ಷಿಣ, ಅರಹಳ್ಳಿ ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ವಿವರಿಸಿದರು.</p>.<p>ಬ್ಯಾಂಕ್ನ ತಾಂತ್ರಿಕ ಸಹಾಯಕ ಹ್ಯಾರೀಸ್, ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳಾದ ವಿಶ್ವ, ಸತೀಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್) ಜುಲೈ 31ರೊಳಗೆ ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿ ಮೂಲಕ ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.</p>.<p>ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಅನುಷ್ಠಾನದ ಗುತ್ತಿಗೆ ಪಡೆದಿರುವ ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳೊಂದಿಗೆ ಇಲ್ಲಿ ಶುಕ್ರವಾರ ಆನ್ಲೈನ್ ಮೂಲಕ ಸಭೆ ನಡೆಸಿದ ಅವರು, ‘ದೇಶದಲ್ಲೇ ಮಾದರಿ ವ್ಯವಸ್ಥೆಯಾಗಿಸುವ ನಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಕೆಲಸ ಮಾಡಿ’ ಎಂದರು.</p>.<p>‘ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿಯು ನಮ್ಮ ಹಾಗೂ ಆಡಳಿತ ಮಂಡಳಿಯ ಕನಸಾಗಿದೆ. ಇದಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ 188 ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸಿಇಒಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.</p>.<p>‘ಸಹಕಾರಿ ವ್ಯವಸ್ಥೆ ಕುರಿತು ನಂಬಿಕೆ ಮತ್ತಷ್ಟು ಬಲಗೊಳ್ಳಲು ಗಣಕೀಕೃತ ಲೆಕ್ಕಪರಿಶೋಧನೆಯು ಅತಿ ಮುಖ್ಯ ಹಂತ. ಇದರಿಂದ ಗ್ರಾಹಕರಲ್ಲಿ ವಿಶ್ವಾಸ ವೃದ್ಧಿಯಾಗುವುದರ ಜತೆಗೆ ಅಂದಿನ ವಹಿವಾಟಿನ ಲೆಕ್ಕ ಅಂದೇ ಆನ್ಲೈನ್ನಲ್ಲಿ ದಾಖಲಾಗುವ ಮೂಲಕ ಆರ್ಥಿಕ ಅಪರಾಧ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>ಜುಲೈ ಗಡುವು: ‘ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನದಲ್ಲಿ ವಿ-ಸಾಫ್ಟ್ ಸಂಸ್ಥೆ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸರಿಯಲ್ಲ. ಜುಲೈ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲೇಬೇಕು. ಪ್ರತಿ 15 ಸೊಸೈಟಿಗಳಿಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.</p>.<p>‘ಅವಿಭಜಿತ ಜಿಲ್ಲೆಯ 188 ಪ್ಯಾಕ್ಸ್ಗಳ ಪೈಕಿ ಈಗಾಗಲೇ 21 ಸೊಸೈಟಿಗಳಲ್ಲಿ ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನ ಮುಗಿದಿದೆ. 41 ಸೊಸೈಟಿಗಳಲ್ಲಿ ಈ ಕಾರ್ಯ ಮುಕ್ತಾಯದ ಹಂತದಲ್ಲಿದೆ. 26 ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಗಣಕೀಕೃತ ಲೆಕ್ಕಪರಿಶೋಧನೆ ಜಾರಿಯಲ್ಲಿ ವಿಫಲವಾಗುವ ಯಾವುದೇ ಪ್ಯಾಕ್ಸ್ಗೆ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡುವುದಿಲ್ಲ. ಸಹಕಾರಿ ವ್ಯವಸ್ಥೆ ಬಲಗೊಳಿಸಿ ಪಾರದರ್ಶಕ ವ್ಯವಸ್ಥೆಯಲ್ಲಿ ಜನರ ನಂಬಿಕೆ ಉಳಿಸಿಕೊಳ್ಳಲು ಈ ಕಾರ್ಯ ಆಗಲೇಬೇಕು’ ಎಂದು ಹೇಳಿದರು.</p>.<p><strong>ಬದ್ಧತೆಯಿದೆ:</strong> ಆನ್ಲೈನ್ ಮೂಲಕ ಸಭೆಯಲ್ಲಿ ಭಾಗಿಯಾದ ವಿ-ಸಾಫ್ಟ್ ಸಂಸ್ಥೆ ಮುಖ್ಯಾಧಿಕಾರಿ ಸಿರೀಶ್, ‘ನಿಮ್ಮ ಸಂಕಲ್ಪಕ್ಕೆ ನಮ್ಮ ಬದ್ಧತೆಯಿದೆ. ಜುಲೈ 31ರೊಳಗೆ ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನ ಪೂರ್ಣಗೊಳಿಸುತ್ತೇವೆ. ಈ ಕಾರ್ಯಕ್ಕೆ ಹೆಚ್ಚಿನ ನುರಿತ ಸಿಬ್ಬಂದಿ ನಿಯೋಜಿಸುತ್ತೇವೆ. ಶನಿವಾರ ಹಾಗೂ ಭಾನುವಾರ ಸಹ ಕೆಲಸ ಮಾಡುತ್ತೇವೆ’ ಎಂದರು.</p>.<p>‘ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಅನುಷ್ಠಾನದಲ್ಲಿ ತೀವ್ರ ಹಿನ್ನಡೆ ಹೊಂದಿರುವ ಸಹಕಾರ ಸಂಘಗಳ ಮಾಹಿತಿ ಕೊಡಿ. ಕೋಲಾರ ತಾಲ್ಲೂಕಿನ ಹುತ್ತೂರು, ಕಸಬಾ ದಕ್ಷಿಣ, ಅರಹಳ್ಳಿ ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ವಿವರಿಸಿದರು.</p>.<p>ಬ್ಯಾಂಕ್ನ ತಾಂತ್ರಿಕ ಸಹಾಯಕ ಹ್ಯಾರೀಸ್, ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳಾದ ವಿಶ್ವ, ಸತೀಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>