<p><strong>ಕೋಲಾರ:</strong> ಜಿಲ್ಲೆಯಲ್ಲಿ 2025-26ನೇ ಸಾಲಿನ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಪಿ?ಒ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ (ಟಿಎಸ್ಪಿ) ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಆಶಾದಾಯಕ ಪ್ರಗತಿ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.</p>.<p>ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖಾವಾರು ಸಾಧನೆಯನ್ನು ಪರಾಮರ್ಶಿಸಿ ಮಾತನಾಡಿದರು.</p>.<p>ಜಿಲ್ಲೆಯಲ್ಲಿ ಈ ಸಾಲಿಗೆ ಒಟ್ಟು ₹ 56,885 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ ಜನವರಿ ಅಂತ್ಯಕ್ಕೆ ₹ 10,186 ಲಕ್ಷಗಳು ವೆಚ್ಚವಾಗುವ ಮೂಲಕ ಶೇ 78ರಷ್ಟು ಪ್ರಗತಿ ದಾಖಲಾಗಿದೆ. ಎಸ್ಸಿಪಿ ಯೋಜನೆಯಲ್ಲಿ ₹ 48,424 ಲಕ್ಷ ಹಂಚಿಕೆಯಲ್ಲಿ ₹ 8,552 ಲಕ್ಷ ವೆಚ್ಚವಾಗಿದ್ದು, ಶೇ 76 ಪ್ರಗತಿ ಆಗಿದೆ. ಟಿಎಸ್ಪಿ ಯೋಜನೆಯಲ್ಲಿ ₹ 8,461 ಲಕ್ಷಗಳ ಹಂಚಿಕೆಯಲ್ಲಿ ₹ 1,634 ಲಕ್ಷ ವೆಚ್ಚವಾಗಿದ್ದು, ಶೇ 92 ಪ್ರಗತಿ ಆಗಿದೆ ಎಂದರು.</p>.<p>ಕೃಷಿ ಇಲಾಖೆಯಲ್ಲಿ ₹ 842.15 ಲಕ್ಷಗಳ ಹಂಚಿಕೆಯಲ್ಲಿ ₹ 488.33 ಲಕ್ಷ ವೆಚ್ಚವಾಗಿದ್ದು, ಶೇ 85ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ₹ 10,901 ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ₹ 1,070.57 ಲಕ್ಷಗಳ ಗುರಿಯಲ್ಲಿ ₹ 589.42 ಲಕ್ಷ ವೆಚ್ಚವಾಗಿ ಶೇ 88ರಷ್ಟು ಪ್ರಗತಿ ಕಂಡಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಹಂಚಿಕೆಯಾದ ₹ 3,050 ಲಕ್ಷಗಳಲ್ಲಿ ₹ 2,629.64 ಲಕ್ಷಗಳನ್ನು ವೆಚ್ಚ ಮಾಡುವ ಮೂಲಕ ಶೇ 100ರಷ್ಟು ಸಾಧನೆ ಮಾಡಲಾಗಿದೆ. ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ₹ 41,071.36 ಲಕ್ಷಗಳ ಬೃಹತ್ ಹಂಚಿಕೆಯಲ್ಲಿ ಪ್ರಗತಿ ಚಾಲನೆಯಲ್ಲಿದ್ದು, ಆಯ್ದ ವಿಭಾಗಗಳಲ್ಲಿ ಶೇ 100ರಷ್ಟು ವೆಚ್ಚ ದಾಖಲಾಗಿದೆ ಎಂದು ವಿವರಿಸಿದರು.</p>.<p>ಸಮಾಜ ಕಲ್ಯಾಣ ಇಲಾಖೆಯಲ್ಲಿ ₹ 1,669.15 ಲಕ್ಷಗಳ ಹಂಚಿಕೆಯಲ್ಲಿ ₹ 1,582.46 ಲಕ್ಷ ವೆಚ್ಚವಾಗಿ ಶೇ 96ರಷ್ಟು ಪ್ರಗತಿ ಸಾಧಿಸಿದೆ ಎಂದು ಪ್ರಶಂಸಿಸಿದರು.</p>.<p>ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಎಲ್ಲಾ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಶೇ 100ರಷ್ಟು ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.</p>.<p>ವಿಶೇಷವಾಗಿ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡಬಾರದೆಂದು ತಾಕೀತು ಮಾಡಿದರು.</p>.<p>ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಜಿಲ್ಲೆಯಲ್ಲಿ 2025-26ನೇ ಸಾಲಿನ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಪಿ?ಒ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ (ಟಿಎಸ್ಪಿ) ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಆಶಾದಾಯಕ ಪ್ರಗತಿ ಆಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.</p>.<p>ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖಾವಾರು ಸಾಧನೆಯನ್ನು ಪರಾಮರ್ಶಿಸಿ ಮಾತನಾಡಿದರು.</p>.<p>ಜಿಲ್ಲೆಯಲ್ಲಿ ಈ ಸಾಲಿಗೆ ಒಟ್ಟು ₹ 56,885 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ ಜನವರಿ ಅಂತ್ಯಕ್ಕೆ ₹ 10,186 ಲಕ್ಷಗಳು ವೆಚ್ಚವಾಗುವ ಮೂಲಕ ಶೇ 78ರಷ್ಟು ಪ್ರಗತಿ ದಾಖಲಾಗಿದೆ. ಎಸ್ಸಿಪಿ ಯೋಜನೆಯಲ್ಲಿ ₹ 48,424 ಲಕ್ಷ ಹಂಚಿಕೆಯಲ್ಲಿ ₹ 8,552 ಲಕ್ಷ ವೆಚ್ಚವಾಗಿದ್ದು, ಶೇ 76 ಪ್ರಗತಿ ಆಗಿದೆ. ಟಿಎಸ್ಪಿ ಯೋಜನೆಯಲ್ಲಿ ₹ 8,461 ಲಕ್ಷಗಳ ಹಂಚಿಕೆಯಲ್ಲಿ ₹ 1,634 ಲಕ್ಷ ವೆಚ್ಚವಾಗಿದ್ದು, ಶೇ 92 ಪ್ರಗತಿ ಆಗಿದೆ ಎಂದರು.</p>.<p>ಕೃಷಿ ಇಲಾಖೆಯಲ್ಲಿ ₹ 842.15 ಲಕ್ಷಗಳ ಹಂಚಿಕೆಯಲ್ಲಿ ₹ 488.33 ಲಕ್ಷ ವೆಚ್ಚವಾಗಿದ್ದು, ಶೇ 85ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ₹ 10,901 ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ₹ 1,070.57 ಲಕ್ಷಗಳ ಗುರಿಯಲ್ಲಿ ₹ 589.42 ಲಕ್ಷ ವೆಚ್ಚವಾಗಿ ಶೇ 88ರಷ್ಟು ಪ್ರಗತಿ ಕಂಡಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಹಂಚಿಕೆಯಾದ ₹ 3,050 ಲಕ್ಷಗಳಲ್ಲಿ ₹ 2,629.64 ಲಕ್ಷಗಳನ್ನು ವೆಚ್ಚ ಮಾಡುವ ಮೂಲಕ ಶೇ 100ರಷ್ಟು ಸಾಧನೆ ಮಾಡಲಾಗಿದೆ. ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ₹ 41,071.36 ಲಕ್ಷಗಳ ಬೃಹತ್ ಹಂಚಿಕೆಯಲ್ಲಿ ಪ್ರಗತಿ ಚಾಲನೆಯಲ್ಲಿದ್ದು, ಆಯ್ದ ವಿಭಾಗಗಳಲ್ಲಿ ಶೇ 100ರಷ್ಟು ವೆಚ್ಚ ದಾಖಲಾಗಿದೆ ಎಂದು ವಿವರಿಸಿದರು.</p>.<p>ಸಮಾಜ ಕಲ್ಯಾಣ ಇಲಾಖೆಯಲ್ಲಿ ₹ 1,669.15 ಲಕ್ಷಗಳ ಹಂಚಿಕೆಯಲ್ಲಿ ₹ 1,582.46 ಲಕ್ಷ ವೆಚ್ಚವಾಗಿ ಶೇ 96ರಷ್ಟು ಪ್ರಗತಿ ಸಾಧಿಸಿದೆ ಎಂದು ಪ್ರಶಂಸಿಸಿದರು.</p>.<p>ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಎಲ್ಲಾ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಶೇ 100ರಷ್ಟು ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.</p>.<p>ವಿಶೇಷವಾಗಿ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡಬಾರದೆಂದು ತಾಕೀತು ಮಾಡಿದರು.</p>.<p>ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>