<p><strong>ಕೋಲಾರ:</strong> ಬೆಂಬಲ ಬೆಲೆ ಯೋಜನೆಯಡಿ ಮಾವು ಖರೀದಿ ಪ್ರಮಾಣ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಡೆ ಗಳಿಗೆಯಲ್ಲಿ ರೈತರಿಗೆ ಬಂಪರ್ ಲಾಭ ಲಭಿಸಿದೆ. ಆದರೆ, ಮಾರಾಟ ಮಾಡಲು ನೋಂದಣಿಗೆ ಗುರುವಾರವೇ ಕೊನೆಯ ದಿನವಾಗಿದ್ದು, ಗಡುವು ವಿಸ್ತರಣೆಯ ಆಶಾವಾದದಲ್ಲಿದ್ದಾರೆ.</p>.<p>ಪ್ರತಿ ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಪ್ರತಿ ರೈತರಿಂದ ಖರೀದಿಸಲು ಆದೇಶಿಸಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ–1 ಆದೇಶ ಹೊರಡಿಸಿದ್ದಾರೆ. ಯೋಜನೆಯಡಿ ಈಗಾಗಲೇ ನೋಂದಾಯಿಸಿಕೊಂಡಿರುವ ರೈತರಿಗೂ ಅನ್ವಯವಾಗಲಿದೆ ಎಂದಿದ್ದಾರೆ. ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.</p>.<p>ಈ ಮೊದಲು ಪ್ರತಿ ಎಕರೆಗೆ 20 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಲ್ವರೆಗೆ ಮಿತಿಗೊಳಿಸಿ ಆದೇಶ ಮಾಡಲಾಗಿತ್ತು. ಮಾವು ಬೆಳೆಗಾರರು, ಸಂಘಟನೆಗಳು ಒತ್ತಾಯ ಮಾಡಿದ್ದರಿಂದ ಖರೀದಿ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.</p>.<p>ಬೆಂಗಳೂರಿನಲ್ಲಿ ಮಂಗಳವಾರ ನಡೆದಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ಸಭೆಯಲ್ಲಿ ಮುಖಂಡರು ಈ ಸಂಬಂಧ ಒತ್ತಾಯಿಸಿದ್ದರು.</p>.<p>ಮಾವು ಧಾರಣೆ ಕುಸಿತದಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕೆ.ಜಿಗೆ ₹ 4 ಬೆಂಬಲ ಬೆಲೆ ಕೊಡುತ್ತಿದೆ.</p>.<p>ನೀಲಂ ಮತ್ತು ತೋತಾಪುರಿ ತಳಿಯ ಮಾವನ್ನು ರೈತರು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ನೀಲಂ ತಳಿಗೆ ₹ 3ರಿಂದ 4, ತೋತಾಪುರಿಗೆ ₹ 5ರಿಂದ 7 ದರ ಸಿಗುತ್ತಿದೆ. ಜೊತೆಗೆ ಬೆಂಬಲ ಬೆಲೆ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಕೆ.ಜಿ ಮಾವಿಗೆ ₹ 16ಕ್ಕಿಂತ ಹೆಚ್ಚು ದರ ಲಭಿಸಿದರೆ ಬೆಂಬಲ ಬೆಲೆ ಸಿಗಲ್ಲ.</p>.<p>ಈವರೆಗೆ ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶದ ರೈತರು ಸುಮಾರು 14,500 ಮಾವು ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದು, 8,868 ಮಂದಿ ಮಾರಾಟ ಮಾಡಿದ ಬಿಲ್ ಸಲ್ಲಿಸಿದ್ದಾರೆ. 7,379 ನೋಂದಾಯಿತ ರೈತರು ಮಾರಾಟ ಮಾಡಿಲ್ಲ, ಬಿಲ್ ಸಲ್ಲಿಸಿಲ್ಲ. ಹಲವು ರೈತರು ತಮ್ಮ ತೋಟದಲ್ಲಿನ ಮಾವು ಕಟಾವು ಮಾಡಬೇಕಿದೆ. ಅದನ್ನು ಮಾರುಕಟ್ಟೆಗೆ ತರಲು ಸಮಯಬೇಕಿದೆ.</p>.<p>‘ಒಂದು ಎಕರೆಯಲ್ಲಿ ಸುಮಾರು 40ರಿಂದ 50 ಕ್ವಿಂಟಲ್ ಮಾವಿನ ಫಸಲು ಬರುತ್ತದೆ. ಆದರೆ, ಸರ್ಕಾರ ಬೆಂಬಲ ಬೆಲೆಯಡಿ ಎಕರೆಗೆ 2 ಟನ್ ಮಾವು ಮಾತ್ರ ಖರೀದಿ ಮಾಡುತ್ತಿದೆ. ಇದರಿಂದ ನಮಗೆ ನಷ್ಟವಾಗಿದೆ. ಪ್ರಮಾಣ ಹೆಚ್ಚಿಸಬೇಕು ’ ಎಂದು ಮಾವು ಬೆಳೆಗಾರ ತೊಟ್ಲಿ ರಮೇಶ್ ಮನವಿ ಮಾಡಿದ್ದರು.</p>.<p> <strong>ಜಿಲ್ಲಾಧಿಕಾರಿ ಪ್ರಸ್ತಾಪಕ್ಕೆ ಸ್ಪಂದನೆ</strong></p><p> ಮಾವು ಬೆಳೆಗಾರರ ಮನವಿ ಮೇರೆಗೆ ಬೆಂಬಲ ಬೆಲೆಯಡಿ ಖರೀದಿ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಪ್ರತಿ ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಖರೀದಿಸಬೇಕೆಂದು ಅವರು ಕೋರಿದ್ದರು. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಬುಧವಾರ (ಜುಲೈ23) ಆದೇಶ ಹೊರಡಿಸಿದೆ. ಖರೀದಿ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಕೂಡ ಆಗ್ರಹಿಸಿದ್ದರು. ಹೆಚ್ಚಳ ಮಾಡದಿದ್ದರೆ ಮತ್ತೆ ಹೋರಾಟಕ್ಕ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಸರ್ಕಾರದ ಈಗಿನ ಆದೇಶದಿಂದ ಮಾವು ಬೆಳೆಗಾರರು ಖುಷಿ ವ್ಯಕ್ತಡಿಸಿದ್ದಾರೆ. ದಿನಾಂಕ ವಿಸ್ತರಣೆ ಮಾಡಿದರೆ ಮತ್ತಷ್ಟು ಖುಷಿಯಾಗಲಿದೆ ಎಂದಿದ್ದಾರೆ.</p>.<p> <strong>ಗಡುವು ವಿಸ್ತರಣೆಗೆ ಕಾದಿರುವ ರೈತರು</strong></p><p> ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾವು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಜುಲೈ 24 ಮಾರಾಟಕ್ಕೆ ಜುಲೈ 26 ಕಡೆಯ ದಿನವಾಗಿದ್ದು ಅವಧಿ ವಿಸ್ತರಣೆಗೆ ಮಾವು ಬೆಳೆಗಾರರು ಕಾದಿದ್ದಾರೆ. ತೋಟದಲ್ಲಿ ಮಾವು ಫಸಲು ಇದ್ದು ಕಟಾವು ಹಾಗೂ ಸಾಗಣೆಗೆ ಕಾಲಾವಕಾಶ ಬೇಕಿದ್ದು ನೋಂದಣಿ ಗಡುವು ವಿಸ್ತರಿಸುವಂತೆ ಕೋರಿದ್ದಾರೆ. ಜಿಲ್ಲಾಡಳಿತದ ಪ್ರಸ್ತಾವನೆ ಮೇರೆಗೆ ಕಾಲಾವಧಿ ವಿಸ್ತರಣೆ ಮಾಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪತ್ರ ಬರೆದಿದ್ದಾರೆ. ನೋಂದಣಿಗೆ ಆಗಸ್ಟ್ 10ರವರೆಗೆ ಖರೀದಿಗೆ ಆ.12ರವರೆಗೆ ಕಾಲಾವಕಾಶ ಮಾಡಿಕೊಡುವಂತೆ ಕೋರಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಬೆಂಬಲ ಬೆಲೆ ಯೋಜನೆಯಡಿ ಮಾವು ಖರೀದಿ ಪ್ರಮಾಣ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಡೆ ಗಳಿಗೆಯಲ್ಲಿ ರೈತರಿಗೆ ಬಂಪರ್ ಲಾಭ ಲಭಿಸಿದೆ. ಆದರೆ, ಮಾರಾಟ ಮಾಡಲು ನೋಂದಣಿಗೆ ಗುರುವಾರವೇ ಕೊನೆಯ ದಿನವಾಗಿದ್ದು, ಗಡುವು ವಿಸ್ತರಣೆಯ ಆಶಾವಾದದಲ್ಲಿದ್ದಾರೆ.</p>.<p>ಪ್ರತಿ ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಪ್ರತಿ ರೈತರಿಂದ ಖರೀದಿಸಲು ಆದೇಶಿಸಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ–1 ಆದೇಶ ಹೊರಡಿಸಿದ್ದಾರೆ. ಯೋಜನೆಯಡಿ ಈಗಾಗಲೇ ನೋಂದಾಯಿಸಿಕೊಂಡಿರುವ ರೈತರಿಗೂ ಅನ್ವಯವಾಗಲಿದೆ ಎಂದಿದ್ದಾರೆ. ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.</p>.<p>ಈ ಮೊದಲು ಪ್ರತಿ ಎಕರೆಗೆ 20 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಲ್ವರೆಗೆ ಮಿತಿಗೊಳಿಸಿ ಆದೇಶ ಮಾಡಲಾಗಿತ್ತು. ಮಾವು ಬೆಳೆಗಾರರು, ಸಂಘಟನೆಗಳು ಒತ್ತಾಯ ಮಾಡಿದ್ದರಿಂದ ಖರೀದಿ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.</p>.<p>ಬೆಂಗಳೂರಿನಲ್ಲಿ ಮಂಗಳವಾರ ನಡೆದಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ಸಭೆಯಲ್ಲಿ ಮುಖಂಡರು ಈ ಸಂಬಂಧ ಒತ್ತಾಯಿಸಿದ್ದರು.</p>.<p>ಮಾವು ಧಾರಣೆ ಕುಸಿತದಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕೆ.ಜಿಗೆ ₹ 4 ಬೆಂಬಲ ಬೆಲೆ ಕೊಡುತ್ತಿದೆ.</p>.<p>ನೀಲಂ ಮತ್ತು ತೋತಾಪುರಿ ತಳಿಯ ಮಾವನ್ನು ರೈತರು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ನೀಲಂ ತಳಿಗೆ ₹ 3ರಿಂದ 4, ತೋತಾಪುರಿಗೆ ₹ 5ರಿಂದ 7 ದರ ಸಿಗುತ್ತಿದೆ. ಜೊತೆಗೆ ಬೆಂಬಲ ಬೆಲೆ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಕೆ.ಜಿ ಮಾವಿಗೆ ₹ 16ಕ್ಕಿಂತ ಹೆಚ್ಚು ದರ ಲಭಿಸಿದರೆ ಬೆಂಬಲ ಬೆಲೆ ಸಿಗಲ್ಲ.</p>.<p>ಈವರೆಗೆ ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶದ ರೈತರು ಸುಮಾರು 14,500 ಮಾವು ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದು, 8,868 ಮಂದಿ ಮಾರಾಟ ಮಾಡಿದ ಬಿಲ್ ಸಲ್ಲಿಸಿದ್ದಾರೆ. 7,379 ನೋಂದಾಯಿತ ರೈತರು ಮಾರಾಟ ಮಾಡಿಲ್ಲ, ಬಿಲ್ ಸಲ್ಲಿಸಿಲ್ಲ. ಹಲವು ರೈತರು ತಮ್ಮ ತೋಟದಲ್ಲಿನ ಮಾವು ಕಟಾವು ಮಾಡಬೇಕಿದೆ. ಅದನ್ನು ಮಾರುಕಟ್ಟೆಗೆ ತರಲು ಸಮಯಬೇಕಿದೆ.</p>.<p>‘ಒಂದು ಎಕರೆಯಲ್ಲಿ ಸುಮಾರು 40ರಿಂದ 50 ಕ್ವಿಂಟಲ್ ಮಾವಿನ ಫಸಲು ಬರುತ್ತದೆ. ಆದರೆ, ಸರ್ಕಾರ ಬೆಂಬಲ ಬೆಲೆಯಡಿ ಎಕರೆಗೆ 2 ಟನ್ ಮಾವು ಮಾತ್ರ ಖರೀದಿ ಮಾಡುತ್ತಿದೆ. ಇದರಿಂದ ನಮಗೆ ನಷ್ಟವಾಗಿದೆ. ಪ್ರಮಾಣ ಹೆಚ್ಚಿಸಬೇಕು ’ ಎಂದು ಮಾವು ಬೆಳೆಗಾರ ತೊಟ್ಲಿ ರಮೇಶ್ ಮನವಿ ಮಾಡಿದ್ದರು.</p>.<p> <strong>ಜಿಲ್ಲಾಧಿಕಾರಿ ಪ್ರಸ್ತಾಪಕ್ಕೆ ಸ್ಪಂದನೆ</strong></p><p> ಮಾವು ಬೆಳೆಗಾರರ ಮನವಿ ಮೇರೆಗೆ ಬೆಂಬಲ ಬೆಲೆಯಡಿ ಖರೀದಿ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಪ್ರತಿ ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಖರೀದಿಸಬೇಕೆಂದು ಅವರು ಕೋರಿದ್ದರು. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಬುಧವಾರ (ಜುಲೈ23) ಆದೇಶ ಹೊರಡಿಸಿದೆ. ಖರೀದಿ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಕೂಡ ಆಗ್ರಹಿಸಿದ್ದರು. ಹೆಚ್ಚಳ ಮಾಡದಿದ್ದರೆ ಮತ್ತೆ ಹೋರಾಟಕ್ಕ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಸರ್ಕಾರದ ಈಗಿನ ಆದೇಶದಿಂದ ಮಾವು ಬೆಳೆಗಾರರು ಖುಷಿ ವ್ಯಕ್ತಡಿಸಿದ್ದಾರೆ. ದಿನಾಂಕ ವಿಸ್ತರಣೆ ಮಾಡಿದರೆ ಮತ್ತಷ್ಟು ಖುಷಿಯಾಗಲಿದೆ ಎಂದಿದ್ದಾರೆ.</p>.<p> <strong>ಗಡುವು ವಿಸ್ತರಣೆಗೆ ಕಾದಿರುವ ರೈತರು</strong></p><p> ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾವು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಜುಲೈ 24 ಮಾರಾಟಕ್ಕೆ ಜುಲೈ 26 ಕಡೆಯ ದಿನವಾಗಿದ್ದು ಅವಧಿ ವಿಸ್ತರಣೆಗೆ ಮಾವು ಬೆಳೆಗಾರರು ಕಾದಿದ್ದಾರೆ. ತೋಟದಲ್ಲಿ ಮಾವು ಫಸಲು ಇದ್ದು ಕಟಾವು ಹಾಗೂ ಸಾಗಣೆಗೆ ಕಾಲಾವಕಾಶ ಬೇಕಿದ್ದು ನೋಂದಣಿ ಗಡುವು ವಿಸ್ತರಿಸುವಂತೆ ಕೋರಿದ್ದಾರೆ. ಜಿಲ್ಲಾಡಳಿತದ ಪ್ರಸ್ತಾವನೆ ಮೇರೆಗೆ ಕಾಲಾವಧಿ ವಿಸ್ತರಣೆ ಮಾಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪತ್ರ ಬರೆದಿದ್ದಾರೆ. ನೋಂದಣಿಗೆ ಆಗಸ್ಟ್ 10ರವರೆಗೆ ಖರೀದಿಗೆ ಆ.12ರವರೆಗೆ ಕಾಲಾವಕಾಶ ಮಾಡಿಕೊಡುವಂತೆ ಕೋರಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>