<p><strong>ಕೋಲಾರ:</strong> ಭೂಪರಿವರ್ತನೆ ಹಾಗೂ ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಮಂಗಳವಾರ ಸಂಜೆ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.</p>.<p>ಶಿರಸ್ತೇದಾರ್ ಚಂದ್ರಪ್ಪ, ಎಫ್ಡಿಎ ಅಜಯ್ ಹಾಗೂ ‘ಡಿ’ ದರ್ಜೆಯ ನೌಕರ ಮುನಿರಾಜು ಟ್ರ್ಯಾಪ್ ಆದವರು.</p>.<p>ಮೂವರ ಮೇಲೆ ಭ್ರಷ್ಟಾಚಾರ ನಿಗ್ರಹದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಚಂದ್ರಪ್ಪ ಹಾಗೂ ಮುನಿರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ. ಅಜಯ್ ಎಂಬುವರು ಈ ಸಂದರ್ಭದಲ್ಲಿ ಕೋರ್ಟ್ ಕೆಲಸಕ್ಕೆಂದು ಹೊರ ಹೋಗಿದ್ದರು ಎಂಬುದು ಗೊತ್ತಾಗಿದೆ.</p>.<p>ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರದ ಮಂಜುನಾಥ್ ಎಂಬುವರು ತಮ್ಮ ಜಮೀನಿನ ಭೂಪರಿವರ್ತನೆ ಹಾಗೂ ಖಾತೆ ವಿಚಾರಕ್ಕೆ ಅರ್ಜಿ ಸಲ್ಲಿಸಿ ಬಹಳ ತಿಂಗಳಾಗಿದ್ದವು. ಕೆಲಸ ಮಾಡಿಕೊಡಲು ₹ 25 ಸಾವಿರ ಕೇಳಿದ್ದರು ಎನ್ನಲಾಗಿದೆ. ಅವರಿಂದ ಆರೋಪಿಗಳು ಒಮ್ಮೆ ₹ 5 ಸಾವಿರ, ಮತ್ತೊಮ್ಮೆ ₹ 10 ಸಾವಿರ ಪಡೆದಿದ್ದಾರೆ. ಇನ್ನುಳಿದ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಸಂಬಂಧದ ಆಡಿಯೋ ಕೂಡ ಇದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.</p>.<p>ಈ ನಡುವೆ ಅರ್ಜಿದಾರ ಈ ವಿಚಾರವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆ. ಅದರಂತೆ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಲು ಕಾರ್ಯಾಚರಣೆ ಕೈಗೊಂಡಿದ್ದಾರೆ.</p>.<p>ಅರ್ಜಿದಾರ ನೀಡಿದ ₹ 22 ಸಾವಿರದಲ್ಲಿ ಸ್ವಲ್ಪ ಮೊತ್ತವನ್ನು ತನ್ನ ಬಳಿ ಇಟ್ಟುಕೊಂಡ ‘ಡಿ’ ದರ್ಜೆ ನೌಕರ ಮುನಿರಾಜು, ಇನ್ನುಳಿದ ಹಣವನ್ನು ಶಿರಸ್ತೇದಾರ ಚಂದ್ರಪ್ಪ ಎಂಬುವರಿಗೆ ಕೊಡಲು ಹೋಗುವಾಗ ಬಲೆಗೆ ಕೆಡವಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.</p>.<p>ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ವಿ.ಧನಂಜಯ, ಡಿವೈಎಸ್ಪಿ ಸುಧೀರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಭೂಪರಿವರ್ತನೆ ಹಾಗೂ ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಮಂಗಳವಾರ ಸಂಜೆ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.</p>.<p>ಶಿರಸ್ತೇದಾರ್ ಚಂದ್ರಪ್ಪ, ಎಫ್ಡಿಎ ಅಜಯ್ ಹಾಗೂ ‘ಡಿ’ ದರ್ಜೆಯ ನೌಕರ ಮುನಿರಾಜು ಟ್ರ್ಯಾಪ್ ಆದವರು.</p>.<p>ಮೂವರ ಮೇಲೆ ಭ್ರಷ್ಟಾಚಾರ ನಿಗ್ರಹದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಚಂದ್ರಪ್ಪ ಹಾಗೂ ಮುನಿರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ. ಅಜಯ್ ಎಂಬುವರು ಈ ಸಂದರ್ಭದಲ್ಲಿ ಕೋರ್ಟ್ ಕೆಲಸಕ್ಕೆಂದು ಹೊರ ಹೋಗಿದ್ದರು ಎಂಬುದು ಗೊತ್ತಾಗಿದೆ.</p>.<p>ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರದ ಮಂಜುನಾಥ್ ಎಂಬುವರು ತಮ್ಮ ಜಮೀನಿನ ಭೂಪರಿವರ್ತನೆ ಹಾಗೂ ಖಾತೆ ವಿಚಾರಕ್ಕೆ ಅರ್ಜಿ ಸಲ್ಲಿಸಿ ಬಹಳ ತಿಂಗಳಾಗಿದ್ದವು. ಕೆಲಸ ಮಾಡಿಕೊಡಲು ₹ 25 ಸಾವಿರ ಕೇಳಿದ್ದರು ಎನ್ನಲಾಗಿದೆ. ಅವರಿಂದ ಆರೋಪಿಗಳು ಒಮ್ಮೆ ₹ 5 ಸಾವಿರ, ಮತ್ತೊಮ್ಮೆ ₹ 10 ಸಾವಿರ ಪಡೆದಿದ್ದಾರೆ. ಇನ್ನುಳಿದ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಸಂಬಂಧದ ಆಡಿಯೋ ಕೂಡ ಇದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.</p>.<p>ಈ ನಡುವೆ ಅರ್ಜಿದಾರ ಈ ವಿಚಾರವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆ. ಅದರಂತೆ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಲು ಕಾರ್ಯಾಚರಣೆ ಕೈಗೊಂಡಿದ್ದಾರೆ.</p>.<p>ಅರ್ಜಿದಾರ ನೀಡಿದ ₹ 22 ಸಾವಿರದಲ್ಲಿ ಸ್ವಲ್ಪ ಮೊತ್ತವನ್ನು ತನ್ನ ಬಳಿ ಇಟ್ಟುಕೊಂಡ ‘ಡಿ’ ದರ್ಜೆ ನೌಕರ ಮುನಿರಾಜು, ಇನ್ನುಳಿದ ಹಣವನ್ನು ಶಿರಸ್ತೇದಾರ ಚಂದ್ರಪ್ಪ ಎಂಬುವರಿಗೆ ಕೊಡಲು ಹೋಗುವಾಗ ಬಲೆಗೆ ಕೆಡವಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.</p>.<p>ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ವಿ.ಧನಂಜಯ, ಡಿವೈಎಸ್ಪಿ ಸುಧೀರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>