<p><strong>ಮಾಲೂರು:</strong> ಪಟ್ಟಣ ಸೇರಿದಂತೆ ತಾಲ್ಲೂಕಿನ ಮಾಸ್ತಿ ಗ್ರಾಮದಿಂದ ಗುಜರಾತ್ನ ಸೂರತ್ನಲ್ಲಿ ನಡೆದ ಜಮಾತ್ ಸಮಾವೇಶಕ್ಕೆ ತೆರಳಿದ್ದ 44 ಯಾತ್ರಾರ್ಥಿಗಳನ್ನು ಬರಮಾಡಿಕೊಂಡ ಜಿಲ್ಲಾಡಳಿತ ಭಾನುವಾರ ಮುಂಜಾನೆ ಆರೋಗ್ಯ ತಪಾಸಣೆ ನಡೆಸಿ 28 ದಿನ ಕ್ವಾರಂಟೇನ್ಗೆ ಒಳಪಡಿಸಿದೆ.</p>.<p>ಪಟ್ಟಣ ಸೇರಿದಂತೆ ತಾಲ್ಲೂಕಿನ ಮಾಸ್ತಿ ಗ್ರಾಮದಿಂದ ಲಾಕ್ಡೌನ್ ಆದೇಶಕ್ಕೂ ಮುನ್ನ, ಗುಜರಾತ್ನ ಸೂರತ್ನಲ್ಲಿ ನಡೆದ ಜಮಾತ್ ಸಮಾವೇಶಕ್ಕೆ 44 ಮುಸ್ಲಿಂ ಯಾತ್ರಾರ್ಥಿಗಳು ತೆರಳಿದ್ದರು. ಲಾಕ್ಡೌನ್ ಆದೇಶದಿಂದ ಸೂರತ್ನಲ್ಲೇ ಸಿಲುಕಿಕೊಂಡಿದ್ದರು.</p>.<p>ಕೇಂದ್ರ ಸರ್ಕಾರದ ಆದೇಶದಂತೆ ಅಲ್ಲಿನ ಸರ್ಕಾರ ಆರೋಗ್ಯ ತಪಾಸಣೆ ನಡೆಸಿ ಬಸ್ಗಳ ಮೂಲಕ ಸ್ವಗ್ರಾಮಗಳಿಗೆ ತೆರಳಲು ಅವಕಾಶ ಕಲ್ಪಿಸಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿಗೆ ಬಂದ ಯಾತ್ರಾರ್ಥಿಗಳನ್ನು ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ ಉಸ್ತುವಾರಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು.</p>.<p>ಬಸ್ಗಳ ಮೂಲಕ ತಾಲ್ಲೂಕಿನ ರಾಜೇನಹಳ್ಳಿಯ ಗ್ರಾಮದ ಸಮೀಪ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಕರೆದೊಯ್ದು ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಗಂಟಲು ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 44 ಮಂದಿಯನ್ನು ಮೊದಲ ಹಂತದಲ್ಲಿ 14 ದಿನ ಕ್ವಾರಂಟೇನ್ನಲ್ಲಿ ಇಡಲಾಗಿದೆ.</p>.<p>ತಾಲ್ಲೂಕು ಆಡಳಿತ ನಿತ್ಯ ಆರೋಗ್ಯ ತಪಾಸಣೆ, ಊಟ, ಇನ್ನಿತರೆ ಸೌಲತ್ತುಗಳನ್ನು ಒದಗಿಸಲಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು:</strong> ಪಟ್ಟಣ ಸೇರಿದಂತೆ ತಾಲ್ಲೂಕಿನ ಮಾಸ್ತಿ ಗ್ರಾಮದಿಂದ ಗುಜರಾತ್ನ ಸೂರತ್ನಲ್ಲಿ ನಡೆದ ಜಮಾತ್ ಸಮಾವೇಶಕ್ಕೆ ತೆರಳಿದ್ದ 44 ಯಾತ್ರಾರ್ಥಿಗಳನ್ನು ಬರಮಾಡಿಕೊಂಡ ಜಿಲ್ಲಾಡಳಿತ ಭಾನುವಾರ ಮುಂಜಾನೆ ಆರೋಗ್ಯ ತಪಾಸಣೆ ನಡೆಸಿ 28 ದಿನ ಕ್ವಾರಂಟೇನ್ಗೆ ಒಳಪಡಿಸಿದೆ.</p>.<p>ಪಟ್ಟಣ ಸೇರಿದಂತೆ ತಾಲ್ಲೂಕಿನ ಮಾಸ್ತಿ ಗ್ರಾಮದಿಂದ ಲಾಕ್ಡೌನ್ ಆದೇಶಕ್ಕೂ ಮುನ್ನ, ಗುಜರಾತ್ನ ಸೂರತ್ನಲ್ಲಿ ನಡೆದ ಜಮಾತ್ ಸಮಾವೇಶಕ್ಕೆ 44 ಮುಸ್ಲಿಂ ಯಾತ್ರಾರ್ಥಿಗಳು ತೆರಳಿದ್ದರು. ಲಾಕ್ಡೌನ್ ಆದೇಶದಿಂದ ಸೂರತ್ನಲ್ಲೇ ಸಿಲುಕಿಕೊಂಡಿದ್ದರು.</p>.<p>ಕೇಂದ್ರ ಸರ್ಕಾರದ ಆದೇಶದಂತೆ ಅಲ್ಲಿನ ಸರ್ಕಾರ ಆರೋಗ್ಯ ತಪಾಸಣೆ ನಡೆಸಿ ಬಸ್ಗಳ ಮೂಲಕ ಸ್ವಗ್ರಾಮಗಳಿಗೆ ತೆರಳಲು ಅವಕಾಶ ಕಲ್ಪಿಸಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿಗೆ ಬಂದ ಯಾತ್ರಾರ್ಥಿಗಳನ್ನು ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ ಉಸ್ತುವಾರಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು.</p>.<p>ಬಸ್ಗಳ ಮೂಲಕ ತಾಲ್ಲೂಕಿನ ರಾಜೇನಹಳ್ಳಿಯ ಗ್ರಾಮದ ಸಮೀಪ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಕರೆದೊಯ್ದು ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಗಂಟಲು ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 44 ಮಂದಿಯನ್ನು ಮೊದಲ ಹಂತದಲ್ಲಿ 14 ದಿನ ಕ್ವಾರಂಟೇನ್ನಲ್ಲಿ ಇಡಲಾಗಿದೆ.</p>.<p>ತಾಲ್ಲೂಕು ಆಡಳಿತ ನಿತ್ಯ ಆರೋಗ್ಯ ತಪಾಸಣೆ, ಊಟ, ಇನ್ನಿತರೆ ಸೌಲತ್ತುಗಳನ್ನು ಒದಗಿಸಲಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>