ಸಲಹೆ: ಮಾವು ಬೆಳೆಗಾರರು ಕಾಯಿ ಕೊಯ್ಲು ಮುಗಿದ ಮೇಲೆ, ತೋಟಗಲ್ಲಿ ಬೇರೆ ಬೇರೆ ಕಾರಣಗಳಿಂದ ಉದುರಿ ಕೊಳೆಯುತ್ತಿರುವ ಮಾವಿನ ಹಣ್ಣನ್ನು ಆರಿಸಿ ಗುಳಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ತೊಟವನ್ನು ಚೆನ್ನಾಗಿ ಉಳುಮೆ ಮಾಡಿ ಸ್ವಚ್ಛಗೊಳಿಸಬೇಕು. ಮರಗಳ ವಯಸ್ಸಿಗೆ ತಕ್ಕಂತೆ ಪಾತಿ ಮಾಡಿ, ಸುರುಗನ್ನು ಮಣ್ಣಿಗೆ ಸೇರಿಸ ಬೇಕು. ಮರಗಳ ಆರೋಗ್ಯ ರಕ್ಷಣೆಗೆ ಆಗಸ್ಟ್ ಒಳಗೆ ಸವರುವಿಕೆ ಮೂಲಕ ಕೊಂಬೆಗಳನ್ನು ಕತ್ತರಿಸಿ ಬಿಸಿಲು, ಗಾಳಿ ಪ್ರವೇಶಿಸಲು ಅವಕಾಶ ಮಾಡಿ ಕೊಡಬೇಕು ಎಂದು ಸಲಹೆ ಮಾಡಿದ್ದಾರೆ.