<p><strong>ಮುಳಬಾಗಿಲು: </strong>ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿದೆ. ಕಳೆದ ವಾರದಿಂದ ಬಿದ್ದ ಮಳೆಗೆ ರೈತರು ಹೊಲಗದ್ದೆಗಳನ್ನು ಹದಗೊಳಿಸಿದ್ದಾರೆ. ಈ ಭಾಗದಲ್ಲಿ ರಾಗಿ, ಭತ್ತ ಪ್ರಮುಖ ಬೆಳೆಯಾಗಿದೆ.</p>.<p>ರೈತರು ತಮ್ಮ ಆರ್ಥಿಕ ಚಟುವಟಿಕೆಯ ಭಾಗವಾಗಿ ಟೊಮೆಟೊ, ಅಲೂಗಡ್ಡೆ, ಕೊತ್ತಂಬರಿಸೊಪ್ಪು, ದಂಟುಸೊಪ್ಪನ್ನು ಬೆಳೆಯನ್ನು ಬೆಳೆಯುತ್ತಾರೆ. ಒಂದು ಫಸಲು ನಷ್ಟ ತಂದುಕೊಟ್ಟರು ಮತ್ತೊಂದು ಫಸಲು ಲಾಭ ತರುವುದೆಂಬುದು ತಾಲ್ಲೂಕಿನ ರೈತರ ಆಶಾಭಾವನೆ.</p>.<p>ಧರಣಿ ಮಳೆ ಬಿದ್ದರೆ ಬೆಳೆ ಬೆಳೆಯುವುದು ಕಾಯಂ ಎಂಬುದು ನಂಬಿಕೆ. ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಸಾಗಿದೆ. ಹಿಂದಿನಂತೆ ಈ ಬಾರಿ ಬಿತ್ತನೆ ಬೀಜದ ಕೊರತೆ ರೈತರನ್ನು ಕಾಡಿಲ್ಲ. ರೈತರು ಕೇಳಿದಷ್ಟು ನೆಲಗಡಲೆ, ರಾಗಿ, ಅವರೆ, ಅಲಸಂದಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ನೀಡಲು ಸಿದ್ಧವಿದೆ ಎಂದು ಕೃಷಿ ಇಲಾಖೆ ಸಹಾಯಕನಿರ್ದೇಶಕ ಅಮರನಾಥರೆಡ್ಡಿ ತಿಳಿಸಿದರು.</p>.<p>ತಾಲ್ಲೂಕಿನಲ್ಲಿ ರಾಗಿ 13,930 ಹೆಕ್ಟೇರ್, ನೆಲಗಡಲೆ 8 ಸಾವಿರ ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಯಾದ ಅಲೂಗಡ್ಡೆಯನ್ನು ತಾಲ್ಲೂಕಿನ ಕಸಬಾ ಬೈರಕೂರು ಹೋಬಳಿಗಳಲ್ಲಿ ಹಾಗೂ ಟೊಮೆಟೊ ತಾಲ್ಲೂಕಿನ ಐದು ಹೋಬಳಿಗಳಲ್ಲೂ 10 ಸಾವಿರ<br />ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು: </strong>ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿದೆ. ಕಳೆದ ವಾರದಿಂದ ಬಿದ್ದ ಮಳೆಗೆ ರೈತರು ಹೊಲಗದ್ದೆಗಳನ್ನು ಹದಗೊಳಿಸಿದ್ದಾರೆ. ಈ ಭಾಗದಲ್ಲಿ ರಾಗಿ, ಭತ್ತ ಪ್ರಮುಖ ಬೆಳೆಯಾಗಿದೆ.</p>.<p>ರೈತರು ತಮ್ಮ ಆರ್ಥಿಕ ಚಟುವಟಿಕೆಯ ಭಾಗವಾಗಿ ಟೊಮೆಟೊ, ಅಲೂಗಡ್ಡೆ, ಕೊತ್ತಂಬರಿಸೊಪ್ಪು, ದಂಟುಸೊಪ್ಪನ್ನು ಬೆಳೆಯನ್ನು ಬೆಳೆಯುತ್ತಾರೆ. ಒಂದು ಫಸಲು ನಷ್ಟ ತಂದುಕೊಟ್ಟರು ಮತ್ತೊಂದು ಫಸಲು ಲಾಭ ತರುವುದೆಂಬುದು ತಾಲ್ಲೂಕಿನ ರೈತರ ಆಶಾಭಾವನೆ.</p>.<p>ಧರಣಿ ಮಳೆ ಬಿದ್ದರೆ ಬೆಳೆ ಬೆಳೆಯುವುದು ಕಾಯಂ ಎಂಬುದು ನಂಬಿಕೆ. ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಸಾಗಿದೆ. ಹಿಂದಿನಂತೆ ಈ ಬಾರಿ ಬಿತ್ತನೆ ಬೀಜದ ಕೊರತೆ ರೈತರನ್ನು ಕಾಡಿಲ್ಲ. ರೈತರು ಕೇಳಿದಷ್ಟು ನೆಲಗಡಲೆ, ರಾಗಿ, ಅವರೆ, ಅಲಸಂದಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ನೀಡಲು ಸಿದ್ಧವಿದೆ ಎಂದು ಕೃಷಿ ಇಲಾಖೆ ಸಹಾಯಕನಿರ್ದೇಶಕ ಅಮರನಾಥರೆಡ್ಡಿ ತಿಳಿಸಿದರು.</p>.<p>ತಾಲ್ಲೂಕಿನಲ್ಲಿ ರಾಗಿ 13,930 ಹೆಕ್ಟೇರ್, ನೆಲಗಡಲೆ 8 ಸಾವಿರ ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಯಾದ ಅಲೂಗಡ್ಡೆಯನ್ನು ತಾಲ್ಲೂಕಿನ ಕಸಬಾ ಬೈರಕೂರು ಹೋಬಳಿಗಳಲ್ಲಿ ಹಾಗೂ ಟೊಮೆಟೊ ತಾಲ್ಲೂಕಿನ ಐದು ಹೋಬಳಿಗಳಲ್ಲೂ 10 ಸಾವಿರ<br />ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>