ಸತತ ಮಳೆ ನಂತರ ಸೋಮವಾರದಿಂದ ಬರುತ್ತಿದ್ದ ಬಿಸಿಲು ಬುಧವಾರ ಸಂಜೆ ವೇಳೆಗೆ ಮಾಯವಾಗಿ, ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿರುವುದು, ಗಾಯದ ಮೇಲೆ ಮತ್ತೊಂದು ಬರೆ ಎರೆದಂತಾಗಿದೆ. ಮಳೆ ಬಿಟ್ಟು ಬಿಸಿಲು ಬರುತ್ತಿದೆ ಎಂಬ ಕಾರಣದಿಂದಾಗಿ ಹೊಲಗಳಿಗೆ ಧಾವಿಸಿದ ರೈತರು ನೆಲಕ್ಕೆ ಬಾಗಿದ ಪೈರುಗಳಲ್ಲಿದ್ದ ರಾಗಿ ತೆನೆಯನ್ನು ಕೊಯ್ಯುವ ಸಾಹಸ ಮಾಡಿದ್ದಾರೆ. ಆದರೆ ಬಹುತೇಕ ರಾಗಿ ತೆನೆಗಳು ನೆಲಕ್ಕೆ ಬಿದ್ದು ಹಾಳಾಗಿವೆ.