ವಾಸ್ತವ ಸಂಗತಿಯನ್ನು ಬಿಟ್ಟು ಗೊಂದಲ ಉಂಟು ಮಾಡುವ ಕರಪತ್ರವನ್ನು ಬಿಜಿಎಂಎಲ್ ಅಧಿಕಾರಿಗಳು ಹೊರಡಿಸಿದ್ದಾರೆ. ಅವರ ಕ್ರಮ ಸರಿಯಲ್ಲ
-ಅನ್ವರಸನ್, ಕಾರ್ಮಿಕ ಮುಖಂಡ
ಆರ್ಥಿಕ ಹೊರೆ
ಕಾರ್ಮಿಕರಿಗೆ ಬರಬೇಕಾದ ಸವಲತ್ತುಗಳ ಬಗ್ಗೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದೇವೆ. 2007ರಲ್ಲಿಯೇ ಸೆಟ್ಲ್ಮೆಂಟ್ ಆಗಿದೆ. ನಾವು ನಗರಸಭೆಯಲ್ಲಿ ತೆರಿಗೆ ಕಟ್ಟಬೇಕೆಂದು ಹೇಳುತ್ತದೆ. ಅದು ಹೇಗೆ ಸಾಧ್ಯ. ಕಾರ್ಮಿಕರನ್ನು ಮತ್ತಷ್ಟು ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕರು ಈಗಾಗಲೇ ಸಾಕಷ್ಟು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರಿಗೆ ಬರಬೇಕಾದ ಸವಲತ್ತುಗಳು ಇನ್ನೂ ಬಂದಿಲ್ಲ. ಇಂತಹ ಸಮಯದಲ್ಲಿ ಹೆಚ್ಚುವರಿ ಹೊರೆಯನ್ನು ಹೊರಿಸುವುದಕ್ಕೆ ಬಿಡುವುದಿಲ್ಲ. ಆರ್ಥಿಕವಾಗಿ ಹೊರೆ ಆಗದಂತೆ ಮನೆಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಬಿಜಿಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಮೂರ್ತಿ ಹೇಳುತ್ತಾರೆ.