ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

Last Updated 4 ಜೂನ್ 2020, 17:23 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿಯಲ್ಲಿ ಮರಳಿನ ದಿಬ್ಬ ಕುಸಿದು ಮೃತಪಟ್ಟಿದ್ದ ಕಾರ್ಮಿಕ ಅಯೂಬ್‌ (25) ಅವರ ಶವವನ್ನು ಪೊಲೀಸರು ಗುರುವಾರ ಹೊರತೆಗೆದು ತಹಶೀಲ್ದಾರ್‌ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.

ಮುಳಬಾಗಿಲಿನ ಬೂಸಾಲಕುಂಟೆಯ ಅಯೂಬ್‌ ಅವರು ದೇವರಾಜ್‌ ಎಂಬುವರ ಜಮೀನಿನಲ್ಲಿ ಮರಳು ತೆಗೆಯುವ ವೇಳೆ ಬುಧವಾರ (ಜೂನ್‌ 3) ನಸುಕಿನಲ್ಲಿ ಮೃತಪಟ್ಟಿದ್ದರು. ಬಳಿಕ ಕದ್ದುಮುಚ್ಚಿ ಅಯೂಬ್‌ರ ಶವವನ್ನು ಬೂಸಾಲಕುಂಟೆಗೆ ಸಾಗಿಸಿಕೊಂಡು ಬಂದು ಹೂತಿಟ್ಟು ಪ್ರಕರಣ ಮರೆಮಾಚಲಾಗಿತ್ತು.

ಬುಧವಾರ ರಾತ್ರಿ ಈ ವಿಷಯ ತಿಳಿದ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದರು. ಮರಳು ದಂಧೆಯಲ್ಲಿ ಜಮೀನಿನ ಮಾಲೀಕ ದೇವರಾಜ್‌ರ ಪಾತ್ರವಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT