ತಾಲ್ಲೂಕಿನಲ್ಲಿ ರಾಗಿ ತೆನೆ ಕಟಾವು ಕಾರ್ಯ ನಡೆಯುತ್ತಿತ್ತು. ಆದರೆ, ಮಳೆಯಿಂದಾಗಿ ಕಟಾವು ಸಾಧ್ಯವಾಗಲಿಲ್ಲ. ತೆನೆ ಒಕ್ಕಣೆ ಮಾಡಿರುವ ರೈತರು, ಗ್ರಾಮಗಳಲ್ಲಿ ಕೋತಿ ಕಾಟದಿಂದ ಬೇಸತ್ತು ಹೊಲಗಳ ಸಮೀಪ ಪ್ಲಾಸ್ಟಿಕ್ ಹಾಳೆ ಹರಡಿ ರಾಗಿ ಒಣಗಿಸುವ ಕಾರ್ಯದಲ್ಲಿ ತೊಡಗಿದ್ದರು. ಮಳೆ ಅದಕ್ಕೂ ಅವಕಾಶ ನೀಡಲಿಲ್ಲ. ಕೆಲವು ಕಡೆ ಒಣಗಲು ಹಾಕಿದ್ದ ರಾಗಿ ಅನಿರೀಕ್ಷಿತ ಮಳೆಗೆ ಸಿಲುಕಿ ನೆನೆದುಹೋಯಿತು.