<p><strong>ಬೇತಮಂಗಲ:</strong> ‘ದೇಶದಲ್ಲಿ ಕೊರೊನಾ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಾಲು ಉತ್ಪಾದಕ ರೈತರ ಹಾಲಿಗೆ ಪ್ರತಿ ಲೀಟರ್ಗೆ ₹1 ಹೆಚ್ಚುವರಿಯಾಗಿ ನೀಡಿದರೆ ಸ್ವಲ್ಪಮಟ್ಟಿಗೆ ಸಹಾಯ ಆಗುತ್ತದೆ’ ಎಂದು ಕೋಚಿಮುಲ್ ಬಂಗಾರಪೇಟೆ-ಕೆ.ಜಿ.ಎಫ್ ತಾಲ್ಲೂಕು ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.</p>.<p>ಗ್ರಾಮದ ಸಮೀಪದ ದೊಡ್ಡಕಾರಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ 2ನೇ ಅಲೆಯಿಂದ ತತ್ತರಿಸಿ ಹೋಗಿರುವ ಕೋಲಾರ-ಚಿಕ್ಕಬಳ್ಳಾಪುರಅವಳಿ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟದ ವತಿಯಿಂದ ಅಕ್ಕಿ ವಿತರಣೆಗೆ ಸಂಬಂಧಪಟ್ಟಂತೆ ಅಧ್ಯಕ್ಷ ವೈ.ನಂಜೇಗೌಡ ಮತ್ತು ಆಡಳಿತ ಮಂಡಳಿಯಮಧ್ಯೆ ಗೊಂದಲ ಉಂಟಾಗಿರುವಹಿನ್ನೆಲೆಯಲ್ಲಿ ಅವರು ತಮ್ಮ ಅನಿಸಿಕೆಯನ್ನು ಹೊರ ಹಾಕಿದರು.</p>.<p>‘ಅಕ್ಕಿ ಮತ್ತು ಮಾಸ್ಕ್ ಕಿಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರು ಆಡಳಿತ ಮಂಡಳಿ ಯಾವುದೇ ಪೂರ್ವಭಾವಿ ಸಭೆ ನಡೆಸಿ ನಮ್ಮ ಅಭಿಪ್ರಾಯ ಪಡೆದಿಲ್ಲ. ಈ ಬಗ್ಗೆ ಅಧ್ಯಕ್ಷರು ನೀಡಿರುವ ಹೇಳಿಕೆ ಅವರ ವೈಯಕ್ತಿಕವಾಗಿರುತ್ತದೆ. ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ಸಭೆ ಕರೆದರೆ ಅಕ್ಕಿ ವಿತರಣೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತೇನೆ’ ಎಂದು ತಿಳಿಸಿದರು.</p>.<p>‘ಹಾಲು ಉತ್ಪಾದನೆ ಮಾಡುವ ರೈತರ ದುಡಿಮೆಯಿಂದ ನಮ್ಮ ಸಂಸ್ಥೆ ನಡೆಯುತ್ತಿದೆ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಅಕ್ಕಿ ನೀಡಿದರೆ ₹1 ಲೀಟರ್ ಹಾಕುವ ರೈತ ಮತ್ತು ₹50 ಲೀಟರ್ ಹಾಲು ಹಾಕುವ ರೈತರಿಗೂ ಒಂದೇ ರೀತಿಯ ಪರಿಹಾರ ನೀಡಿದಂತಾಗುತ್ತದೆ. ಉತ್ಪಾದಕರ ಖಾತೆಗೆ ಜಮಾ ಮಾಡಿದರೆ ಹೆಚ್ಚುವರಿ ಹಣವೂ ನೇರವಾಗಿ ಉತ್ಪಾದಕರ ಕೈ ಸೇರುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಎರಡು ತಿಂಗಳ ಕಾಲ ನೀಡಿದರೆ ಹೆಚ್ಚುವರಿಯಾಗಿ ₹6 ಕೋಟಿ ಸಂಸ್ಥೆಗೆ ಹೊರೆಯಾಗುತ್ತದೆ. ಆದರೆ ಅಕ್ಕಿಯನ್ನು ನೀಡಿದರೂ ಹೆಚ್ಚು ಕಡಿಮೆ ಅದೇ ಲೆಕ್ಕಕ್ಕೆ ಬರುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ:</strong> ‘ದೇಶದಲ್ಲಿ ಕೊರೊನಾ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಾಲು ಉತ್ಪಾದಕ ರೈತರ ಹಾಲಿಗೆ ಪ್ರತಿ ಲೀಟರ್ಗೆ ₹1 ಹೆಚ್ಚುವರಿಯಾಗಿ ನೀಡಿದರೆ ಸ್ವಲ್ಪಮಟ್ಟಿಗೆ ಸಹಾಯ ಆಗುತ್ತದೆ’ ಎಂದು ಕೋಚಿಮುಲ್ ಬಂಗಾರಪೇಟೆ-ಕೆ.ಜಿ.ಎಫ್ ತಾಲ್ಲೂಕು ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.</p>.<p>ಗ್ರಾಮದ ಸಮೀಪದ ದೊಡ್ಡಕಾರಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ 2ನೇ ಅಲೆಯಿಂದ ತತ್ತರಿಸಿ ಹೋಗಿರುವ ಕೋಲಾರ-ಚಿಕ್ಕಬಳ್ಳಾಪುರಅವಳಿ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟದ ವತಿಯಿಂದ ಅಕ್ಕಿ ವಿತರಣೆಗೆ ಸಂಬಂಧಪಟ್ಟಂತೆ ಅಧ್ಯಕ್ಷ ವೈ.ನಂಜೇಗೌಡ ಮತ್ತು ಆಡಳಿತ ಮಂಡಳಿಯಮಧ್ಯೆ ಗೊಂದಲ ಉಂಟಾಗಿರುವಹಿನ್ನೆಲೆಯಲ್ಲಿ ಅವರು ತಮ್ಮ ಅನಿಸಿಕೆಯನ್ನು ಹೊರ ಹಾಕಿದರು.</p>.<p>‘ಅಕ್ಕಿ ಮತ್ತು ಮಾಸ್ಕ್ ಕಿಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರು ಆಡಳಿತ ಮಂಡಳಿ ಯಾವುದೇ ಪೂರ್ವಭಾವಿ ಸಭೆ ನಡೆಸಿ ನಮ್ಮ ಅಭಿಪ್ರಾಯ ಪಡೆದಿಲ್ಲ. ಈ ಬಗ್ಗೆ ಅಧ್ಯಕ್ಷರು ನೀಡಿರುವ ಹೇಳಿಕೆ ಅವರ ವೈಯಕ್ತಿಕವಾಗಿರುತ್ತದೆ. ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ಸಭೆ ಕರೆದರೆ ಅಕ್ಕಿ ವಿತರಣೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತೇನೆ’ ಎಂದು ತಿಳಿಸಿದರು.</p>.<p>‘ಹಾಲು ಉತ್ಪಾದನೆ ಮಾಡುವ ರೈತರ ದುಡಿಮೆಯಿಂದ ನಮ್ಮ ಸಂಸ್ಥೆ ನಡೆಯುತ್ತಿದೆ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಅಕ್ಕಿ ನೀಡಿದರೆ ₹1 ಲೀಟರ್ ಹಾಕುವ ರೈತ ಮತ್ತು ₹50 ಲೀಟರ್ ಹಾಲು ಹಾಕುವ ರೈತರಿಗೂ ಒಂದೇ ರೀತಿಯ ಪರಿಹಾರ ನೀಡಿದಂತಾಗುತ್ತದೆ. ಉತ್ಪಾದಕರ ಖಾತೆಗೆ ಜಮಾ ಮಾಡಿದರೆ ಹೆಚ್ಚುವರಿ ಹಣವೂ ನೇರವಾಗಿ ಉತ್ಪಾದಕರ ಕೈ ಸೇರುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಎರಡು ತಿಂಗಳ ಕಾಲ ನೀಡಿದರೆ ಹೆಚ್ಚುವರಿಯಾಗಿ ₹6 ಕೋಟಿ ಸಂಸ್ಥೆಗೆ ಹೊರೆಯಾಗುತ್ತದೆ. ಆದರೆ ಅಕ್ಕಿಯನ್ನು ನೀಡಿದರೂ ಹೆಚ್ಚು ಕಡಿಮೆ ಅದೇ ಲೆಕ್ಕಕ್ಕೆ ಬರುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>