<p><strong>ಮುಳಬಾಗಿಲು</strong>: ತಾಲ್ಲೂಕಿನ ಊರಕುಂಟೆ ಮಿಟ್ಟೂರು ಗ್ರಾಮದಲ್ಲಿ ಮಂಗಳವಾರ ರೇಷ್ಮೆ ಬೆಳೆಗಾರರ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. </p>.<p>ತಾಲ್ಲೂಕು ರೇಷ್ಮೆ ಸಹಾಯಕ ನಿರ್ದೇಶಕ ಜಿ.ವಿ.ಶ್ರೀನಿವಾಸಗೌಡ ಮಾತನಾಡಿ, ದ್ವಿ ತಳಿ ಬೆಳೆಯು ರೇಷ್ಮೆ ಬೆಳೆಗಾರರಿಗೆ ಹೆಚ್ಚು ಲಾಭದಾಯಕವಾಗಿದ್ದು, ಹೆಚ್ಚು ರೈತರು ರೇಷ್ಮೆ ಬೆಳೆ ಕೃಷಿ ಮಾಡಲು ಮುಂದಾಗಿ ಹೆಚ್ಚು ಲಾಭ ಗಳಿಸಿ ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.</p>.<p>ತಾಲ್ಲೂಕಿನಲ್ಲಿ ರೈತರು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದಿದ್ದರೂ ನಾನಾ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ರೈತರು ಹೆಚ್ಚು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಲಾಭದ ಮಾರ್ಗವನ್ನು ಅನುಸರಿಸಬೇಕು ಎಂದರು.</p>.<p>ಸಾಮಾನ್ಯವಾಗಿ ಮಿಶ್ರ ತಳಿ ಬೆಳೆಗಳಿಗೆ ಹೋಲಿಕೆ ಮಾಡಿದರೆ, ದ್ವಿತಳಿ ಬೆಳೆ ನಿರ್ವಹಣೆ ಉತ್ತಮ ಲಾಭದ ಬೆಳೆಯಾಗಿದೆ. ರೈತರು ರೇಷ್ಮೆ ಇಲಾಖೆಯ ಮೂಲಕ ಅರಿವು ಪಡೆದು ಗುಣಮಟ್ಟದ ಗೂಡನ್ನು ಉತ್ಪಾದಿಸಿ ಎಂದರು.</p>.<p>ರೇಷ್ಮೆ ಇಲಾಖೆ ಉಪನಿರ್ದೇಶಕ ಸಿ.ಆರ್.ಆಂಜನೇಯ ರೆಡ್ಡಿ, ಹಿಪ್ಪು ನೇರಳೆ ತೋಟಗಳ ನಿರ್ವಹಣೆ ಹಾಗೂ ನೂತನ ತಾಂತ್ರಿಕತೆ ಕುರಿತು ಅರಿವು ಮೂಡಿಸಿ, ಉತ್ತಮ ರೇಷ್ಮೆ ಬೆಳೆ ಬೆಳೆಯಲು ಸಲಹೆ ನೀಡಿದರು.</p>.<p>ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಪರಮೇಶ್ವರ ನಾಯಕ್ ಮಾತನಾಡಿ, ಸುಣ್ಣಕಟ್ಟು ರೋಗ ಮತ್ತು ತೋಟಗಳಿಗೆ ತಗಲುವ ಬೂದಿ ರೋಗ ಹತೋಟಿ ಕ್ರಮ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದರು.</p>.<p>ತಾಲ್ಲೂಕು ರೇಷ್ಮೆ ನಿರೀಕ್ಷಕ ಎಂ.ಆರ್.ಪ್ರಸನ್ನ, ತಾಯಲೂರು ರೇಷ್ಮೆ ನಿರೀಕ್ಷಕ ಬಿ.ಜಿ.ಕಾರ್ತಿಕ್, ರೇಷ್ಮೆ ನಿರೀಕ್ಷಕ ಎಸ.ಹರೀಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೇಷ್ಮೆ ಬೆಳಗಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ತಾಲ್ಲೂಕಿನ ಊರಕುಂಟೆ ಮಿಟ್ಟೂರು ಗ್ರಾಮದಲ್ಲಿ ಮಂಗಳವಾರ ರೇಷ್ಮೆ ಬೆಳೆಗಾರರ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. </p>.<p>ತಾಲ್ಲೂಕು ರೇಷ್ಮೆ ಸಹಾಯಕ ನಿರ್ದೇಶಕ ಜಿ.ವಿ.ಶ್ರೀನಿವಾಸಗೌಡ ಮಾತನಾಡಿ, ದ್ವಿ ತಳಿ ಬೆಳೆಯು ರೇಷ್ಮೆ ಬೆಳೆಗಾರರಿಗೆ ಹೆಚ್ಚು ಲಾಭದಾಯಕವಾಗಿದ್ದು, ಹೆಚ್ಚು ರೈತರು ರೇಷ್ಮೆ ಬೆಳೆ ಕೃಷಿ ಮಾಡಲು ಮುಂದಾಗಿ ಹೆಚ್ಚು ಲಾಭ ಗಳಿಸಿ ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.</p>.<p>ತಾಲ್ಲೂಕಿನಲ್ಲಿ ರೈತರು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದಿದ್ದರೂ ನಾನಾ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ರೈತರು ಹೆಚ್ಚು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಲಾಭದ ಮಾರ್ಗವನ್ನು ಅನುಸರಿಸಬೇಕು ಎಂದರು.</p>.<p>ಸಾಮಾನ್ಯವಾಗಿ ಮಿಶ್ರ ತಳಿ ಬೆಳೆಗಳಿಗೆ ಹೋಲಿಕೆ ಮಾಡಿದರೆ, ದ್ವಿತಳಿ ಬೆಳೆ ನಿರ್ವಹಣೆ ಉತ್ತಮ ಲಾಭದ ಬೆಳೆಯಾಗಿದೆ. ರೈತರು ರೇಷ್ಮೆ ಇಲಾಖೆಯ ಮೂಲಕ ಅರಿವು ಪಡೆದು ಗುಣಮಟ್ಟದ ಗೂಡನ್ನು ಉತ್ಪಾದಿಸಿ ಎಂದರು.</p>.<p>ರೇಷ್ಮೆ ಇಲಾಖೆ ಉಪನಿರ್ದೇಶಕ ಸಿ.ಆರ್.ಆಂಜನೇಯ ರೆಡ್ಡಿ, ಹಿಪ್ಪು ನೇರಳೆ ತೋಟಗಳ ನಿರ್ವಹಣೆ ಹಾಗೂ ನೂತನ ತಾಂತ್ರಿಕತೆ ಕುರಿತು ಅರಿವು ಮೂಡಿಸಿ, ಉತ್ತಮ ರೇಷ್ಮೆ ಬೆಳೆ ಬೆಳೆಯಲು ಸಲಹೆ ನೀಡಿದರು.</p>.<p>ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಪರಮೇಶ್ವರ ನಾಯಕ್ ಮಾತನಾಡಿ, ಸುಣ್ಣಕಟ್ಟು ರೋಗ ಮತ್ತು ತೋಟಗಳಿಗೆ ತಗಲುವ ಬೂದಿ ರೋಗ ಹತೋಟಿ ಕ್ರಮ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದರು.</p>.<p>ತಾಲ್ಲೂಕು ರೇಷ್ಮೆ ನಿರೀಕ್ಷಕ ಎಂ.ಆರ್.ಪ್ರಸನ್ನ, ತಾಯಲೂರು ರೇಷ್ಮೆ ನಿರೀಕ್ಷಕ ಬಿ.ಜಿ.ಕಾರ್ತಿಕ್, ರೇಷ್ಮೆ ನಿರೀಕ್ಷಕ ಎಸ.ಹರೀಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೇಷ್ಮೆ ಬೆಳಗಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>