ಕಾಕಿನತ್ತ ಗ್ರಾಮದ ಗಂಗಮ್ಮ ದೇವಾಲಯದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ₹ 10 ಲಕ್ಷ ಮೌಲ್ಯದ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ₹ 2 ಸಾವಿರ ದೋಚಿದ್ದಾರೆ.ಇದೇ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಕೈಚಳಕ ತೋರಿರುವ ಕಳ್ಳರು ₹ 4 ಸಾವಿರ ಹುಂಡಿ ಹಣ ಕಳವು ಮಾಡು ದೇವರ ಅಲಂಕಾರಿಕ ವಸ್ತುಗಳು ಮತ್ತು ದೇವಸ್ಥಾನದ ಬ್ಯಾಂಕ್ ಪುಸ್ತಕವನ್ನು ಸ್ವಲ್ಪ ದೂರದಲ್ಲಿ ಎಸೆದು ಪರಾರಿಯಾಗಿದ್ದಾರೆ.