ಗುಟ್ಟಹಳ್ಳಿಯ ಶಿಕ್ಷಕ ಚೆನ್ನಬಸವರಾಜ ಅವರು ಆಗಸ್ಟ್ 15ರಂದು ‘ಮೂವಿ ಪ್ಲಸ್’ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸರಿಯಾದ ಉತ್ತರ ಹೇಳಿದವರಿಗೆ ಬಹುಮಾನ ಇದೆ ಎಂದು ಘೋಷಿಸಲಾಗಿತ್ತು. ಅದರಂತೆ ಕರೆ ಮಾಡಿದ ಚೆನ್ನಬಸಬರಾಜ ಅವರು ಉತ್ತರವನ್ನು ಹೇಳಿದ್ದರು. ಎರಡು ದಿನದ ನಂತರ ದಯಾನಂದ ಮಿಶ್ರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ, ನೀವು ಕಾರ್ಯಕ್ರಮದಲ್ಲಿ ಗೆದ್ದಿದ್ದೀರಿ. ಹಣ ಪಡೆಯಲು ಸೆಕ್ಯುರಿಟಿ ಹಣವನ್ನು ಕಟ್ಟಬೇಕು ಎಂದು ಹೇಳಿದರು. ಅವರ ಮಾತನ್ನು ನಂಬಿದ ಶಿಕ್ಷಕ, ಅಪರಿಚಿತ ಸೂಚಿಸಿದ ಬ್ಯಾಂಕ್ ಖಾತೆಗೆ ₹ 24,500 ರೂಪಾಯಿ ಕಟ್ಟಿದರು. ಆದರೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಮೋಸ ಹೋಗಿದ್ದು ತಿಳಿದುಬಂದಿತ್ತು. ಚೆನ್ನಬಸವರಾಜ ನೀಡಿದ ದೂರಿನ ಮೇರೆಗೆ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.