ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೋಲಾರ | ನಿಗಮ ಮಂಡಳಿಯಲ್ಲಿ ಜಿಲ್ಲೆಗೆ ಸಿಗದ ಅವಕಾಶ: ಕಾಂಗ್ರೆಸ್ಸಿಗರ ಅಸಮಾಧಾನ

Published : 1 ಮಾರ್ಚ್ 2024, 6:47 IST
Last Updated : 1 ಮಾರ್ಚ್ 2024, 6:47 IST
ಫಾಲೋ ಮಾಡಿ
Comments
ವಿವಿಧ ಜಿಲ್ಲೆಗಳ 44 ಮಂದಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಸ್ಥಾನ ಪಟ್ಟಿಯಲ್ಲಿ ಕೋಲಾರ ಜಿಲ್ಲೆಯ ಒಬ್ಬರ ಹೆಸರೂ ಇಲ್ಲ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದು ಸುಮಾರು 15 ಅರ್ಜಿ
ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದಶಕಗಳಿಂದ ದುಡಿಯುವವರಿಗೆ ಅನ್ಯಾಯವಾಗಿದೆ. ನಾವೂ ಅವಕಾಶದ ನಿರೀಕ್ಷೆಯಲ್ಲಿದ್ದೆ. ಮುಂದೆಯಾದರೂ ಪಕ್ಷ ನ್ಯಾಯ ದೊರಕಿಸಿಕೊಡುತ್ತದೆ ಎಂಬ ವಿಶ್ವಾಸ ನನ್ನದು
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೋಲಾರ
ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರನ್ನು ನಿರ್ಲಕ್ಷಿಸಿರುವುದು ತುಂಬಾ ನಿರಾಸೆ ಬೇಸರ ಉಂಟು ಮಾಡಿದೆ. ಪಕ್ಷಕ್ಕೆ ದುಡಿದವರನ್ನು ಗುರುತಿಸುವುದಿಲ್ಲವೆಂದರೆ ಹೇಗೆ? ಏಕಿಷ್ಟು ನಿರ್ಲಕ್ಷ್ಯ?
ಊರುಬಾಗಿಲು ಶ್ರೀನಿವಾಸ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕೋಲಾರ
ಬೇಸರವಾಗಿರುವುದು ನಿಜ. ಆದರೆ ನಮ್ಮ ಕೆಲಸದ ಬಗ್ಗೆ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಮುಂದೆ ಅವಕಾಶ ಸಿಗಬಹುದು. ಸಿದ್ದರಾಮಯ್ಯ ಡಿಕೆಶಿ ಮುನಿಯಪ್ಪ ಅವರ ಮೇಲೆ ನಂಬಿಕೆ ಇದೆ
ಕೆ.ಜಯದೇವ ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಕೋಲಾರ
‘ಕೆಲವರಿಗೆ ಕಾಂಗ್ರೆಸ್‌ ಸಿದ್ಧಾಂತವೇ ಗೊತ್ತಿಲ್ಲ’
‘ಜಿಲ್ಲೆಯಲ್ಲಿ ಕೋವಿಡ್ ಸಮಯದಲ್ಲಿ ಜನರ ಸೇವೆ ಯಾರು ಮಾಡಿದ್ದು? ಪಕ್ಷಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಹೋರಾಟ ಮಾಡುತ್ತಿರುವುದು ಯಾರು? ಪ್ರತಿಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸಿ ಪಕ್ಷದ ನಿಲುವು ಸಮರ್ಥಿಸಿಕೊಂಡಿರುವವರು ಯಾರು’ ಎಂದು ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ ಪ್ರಶ್ನಿಸಿದರು. ‘ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕ್ರಮ ಮಾಡುವುದು ಸನ್ಮಾನ ಮಾಡುವುದು ಕಾರ್ಯಕರ್ತರಾಗಿ ದುಡಿದಿದ್ದು ಕೆಲಸ ಮಾಡಿದ್ದು ನಾವು. ಆದರೆ ಕೆಲವರು ಇವತ್ತು ಒಬ್ಬರ ಜೊತೆ ಇರುತ್ತಾರೆ ನಾಳೆ ಇನ್ನೊಬ್ಬರ ಜೊತೆ ಕಾಣಿಸಿಕೊಳ್ಳುತ್ತಾರೆ. ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾರೆ. ಕೆಲವರಿಗೆ ಕಾಂಗ್ರೆಸ್‌ ಸಿದ್ಧಾಂತವೇ ಗೊತ್ತಿಲ್ಲ ಕಾಂಗ್ರೆಸ್‌ ಧ್ವಜವನ್ನೇ ಮುಟ್ಟಿದವರಲ್ಲ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT