ಜಿಲ್ಲೆಯ ಮಾಲೂರು ತಾಲ್ಲೂಕಿನ ರಾಮಸಾಗರದ ಚಂದ್ರಿಕಾ ಎಂಬುವರು ಹೆರಿಗೆಗಾಗಿ ಮೇ 5ರಂದು ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಸಹಜ ಹೆರಿಗೆ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ರಕ್ತಸ್ರಾವ ತಡೆಗೆ ಆಕೆಯ ದೇಹದಲ್ಲಿ ಡ್ರೆಸ್ಸಿಂಗ್ ಬ್ಯಾಂಡೇಜ್ ಬಟ್ಟೆ ಇಟ್ಟ ವೈದ್ಯರು ಹಾಗೂ ಸಿಬ್ಬಂದಿ ಬಳಿಕ ಅದನ್ನು ಅಲ್ಲಿಯೇ ಮರೆತು ಮಹಿಳೆಯನ್ನು ಮನೆಗೆ ಕಳಿಸಿದ್ದಾರೆ.