ಶಾಲೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯು ಹೇಮಂತ್ಕುಮಾರ್ಗೆ ಪಠ್ಯಪುಸ್ತಕ, ಬಟ್ಟೆ ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೇ, ಮನೆಗೆ ದಿನಸಿ ಪದಾರ್ಥ ಮತ್ತು ಪಾತ್ರೆಗಳನ್ನು ನೀಡಿ ಜೀವನಕ್ಕೆ ನೆರವಾಗಿದ್ದಾರೆ.ಗ್ರಾಮಸ್ಥ ಎ.ಮಹೇಂದ್ರ ಅವರು ಬಾಲಕನಿಗೆ ಶಾಲೆಗೆ ಹೋಗಿ ಬರುವುದಕ್ಕೆ ಸೈಕಲ್ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಹೇಮಂತ್ಕುಮಾರ್, ಗ್ರಾಮಸ್ಥರು ಹಾಗೂ ಶಾಲೆ ಶಿಕ್ಷಕರ ನೆರವಿನಿಂದ ಶೈಕ್ಷಣಿಕ ಜೀವನ ಮುಂದುವರಿಸುವಂತಾಗಿದೆ.