ಬೊಂಬೆಗಳ ಸಮ್ಮುಖದಲ್ಲಿ ನವರಾತ್ರಿಯ ಪೂಜೆ ರಂಗೇರಿದೆ. ಕುಂಬಾರ ಪೇಟೆಯಲ್ಲಿರುವ ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ್ ಮನೆಗೆ ಬಂದರೆ ಅಲ್ಲಿ ಬೊಂಬೆಗಳ ಲೋಕವೇ ಅನಾವರಣಗೊಂಡಿದೆ. ಭಾರತದ ಹಲವು ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ಸದ್ದಿಲ್ಲದೆ ಹೇಳುತ್ತವೆ. ಪುರಾಣಗಳಿಗೆ ಸಂಬಂಧಿಸಿದ ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಲೀಲೆ, ಗೀತೋಪದೇಶ, ಜಂಬೂಸವಾರಿ, ದಶಾವತಾರದ ಕಥನಗಳನ್ನು ಹೇಳುವ ಬೊಂಬೆಗಳ ಜೊತೆಗೆ, ತಿರುಪತಿಯ 9 ದಿನದ ಬ್ರಹ್ಮೋತ್ಸವ, ಭಾರತೀಯ ಸಮಾಜದ ಕುಟುಂಬ ಜೀವನದ ಚಕ್ರ, ವಿವಿಧ ರಾಜ್ಯಗಳ ಮಹಿಳೆಯರ ಉಡುಪು ವಿಶೇಷಗಳನ್ನು ತೋರುವ ಬೊಂಬೆಗಳಿವೆ.