<p>ಮುಳಬಾಗಿಲು: ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ಹಾಗೂ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. </p>.<p>ಬಂಧಿತರಿಂದ ಚಿನ್ನಾಭರಣ, ಶ್ರೀಗಂಧದ ಮರದ ತುಂಡುಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. </p>.<p>ಮುಳಬಾಗಿಲು ತಾಲ್ಲೂಕಿನ ಚೋಳಂಗುಂಟೆ ಮತ್ತಿತರರ ಕಡೆಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡಿದ್ದ ಆಂಧ್ರಪ್ರದೇಶದ ವಿಕೋಟೆ ಮೂಲದ ಸುಬ್ರಮಣಿ (28) ಹಾಗೂ ಅರುಣ್ (25) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹10 ಲಕ್ಷ ಬೆಲೆ ಬಾಳುವ 105 ಕೆಜಿ ಶ್ರೀಗಂಧ ಮರದ ತುಂಡು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.</p>.<p>ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಡಿಕಲ್ ಗ್ರಾಮದ ಪುರುಷೋತ್ತಮ ರೆಡ್ಡಿ (41) ಸುತ್ತಮುತ್ತಲಿನ ರೈತರಿಂದ ₹70 ಲಕ್ಷ ಬೆಲೆ ಬಾಳುವ 10 ಟ್ರಾಕ್ಟರ್ಗಳನ್ನು ಬಾಡಿಗೆಗೆ ಎಂದು ಪಡೆದು ಹತ್ತು ಟ್ರಾಕ್ಟರ್ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದರು. ಹಾಗಾಗಿ ಆರೋಪಿಯನ್ನು ಬಂಧಿಸಿ 10 ಟ್ರಾಕ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಘಟನೆಗಳಲ್ಲಿ ಚಿಂತಾಮಣಿ ಹಾಗೂ ಮೊಗಲಹಳ್ಳಿ ಆರೋಪಿಗಳಾದ ಪ್ರೇಮ್ ಕುಮಾರ್ (19), ಬಾಬಾ (27), ವಿಜಯ್ (29) ಎಂಬುವವರು ಆಭರಣ ಕಳ್ಳತನ ಮಾಡಿ ರೋಜಾ (36) ಎಂಬುವವರಿಗೆ ಮಾರಾಟ ಮಾಡಿದ್ದರು. ಈ ನಾಲ್ವರನ್ನು ಬಂಧಿಸಿದ್ದು, 171 ಗ್ರಾಂ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದರು. </p>.<p>ಈ ಕಾರ್ಯಾಚರಣೆಯಲಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲೇ ಅಭಿನಂದಿಸಿ ನಗದು ಬಹುಮಾನ ವಿತರಿಸಲಾಯಿತು.</p>.<p>ಎಎಸ್ಪಿ ಮನಿಷಾ, ಮುಳಬಾಗಿಲು ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್, ಶಿವಕುಮಾರ್, ಸಿಬ್ಬಂದಿಯಾದ ಆನಂದ್, ವೆಂಕಟ ರಾಘವನ್, ಲಕ್ಷ್ಮಿ ನಾರಾಯಣ, ಗುರುಪ್ರಸಾದ್, ಸಂತೋಷ್, ಸಬಾನ್, ವಿಜಯ್, ಸುಬ್ರಮಣಿ, ನಾಗಾರ್ಜುನ, ಶಶಿಕಲಾ, ಸದಾಶಿವ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಿಲು: ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ಹಾಗೂ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. </p>.<p>ಬಂಧಿತರಿಂದ ಚಿನ್ನಾಭರಣ, ಶ್ರೀಗಂಧದ ಮರದ ತುಂಡುಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. </p>.<p>ಮುಳಬಾಗಿಲು ತಾಲ್ಲೂಕಿನ ಚೋಳಂಗುಂಟೆ ಮತ್ತಿತರರ ಕಡೆಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡಿದ್ದ ಆಂಧ್ರಪ್ರದೇಶದ ವಿಕೋಟೆ ಮೂಲದ ಸುಬ್ರಮಣಿ (28) ಹಾಗೂ ಅರುಣ್ (25) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹10 ಲಕ್ಷ ಬೆಲೆ ಬಾಳುವ 105 ಕೆಜಿ ಶ್ರೀಗಂಧ ಮರದ ತುಂಡು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.</p>.<p>ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಡಿಕಲ್ ಗ್ರಾಮದ ಪುರುಷೋತ್ತಮ ರೆಡ್ಡಿ (41) ಸುತ್ತಮುತ್ತಲಿನ ರೈತರಿಂದ ₹70 ಲಕ್ಷ ಬೆಲೆ ಬಾಳುವ 10 ಟ್ರಾಕ್ಟರ್ಗಳನ್ನು ಬಾಡಿಗೆಗೆ ಎಂದು ಪಡೆದು ಹತ್ತು ಟ್ರಾಕ್ಟರ್ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದರು. ಹಾಗಾಗಿ ಆರೋಪಿಯನ್ನು ಬಂಧಿಸಿ 10 ಟ್ರಾಕ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಘಟನೆಗಳಲ್ಲಿ ಚಿಂತಾಮಣಿ ಹಾಗೂ ಮೊಗಲಹಳ್ಳಿ ಆರೋಪಿಗಳಾದ ಪ್ರೇಮ್ ಕುಮಾರ್ (19), ಬಾಬಾ (27), ವಿಜಯ್ (29) ಎಂಬುವವರು ಆಭರಣ ಕಳ್ಳತನ ಮಾಡಿ ರೋಜಾ (36) ಎಂಬುವವರಿಗೆ ಮಾರಾಟ ಮಾಡಿದ್ದರು. ಈ ನಾಲ್ವರನ್ನು ಬಂಧಿಸಿದ್ದು, 171 ಗ್ರಾಂ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದರು. </p>.<p>ಈ ಕಾರ್ಯಾಚರಣೆಯಲಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲೇ ಅಭಿನಂದಿಸಿ ನಗದು ಬಹುಮಾನ ವಿತರಿಸಲಾಯಿತು.</p>.<p>ಎಎಸ್ಪಿ ಮನಿಷಾ, ಮುಳಬಾಗಿಲು ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್, ಶಿವಕುಮಾರ್, ಸಿಬ್ಬಂದಿಯಾದ ಆನಂದ್, ವೆಂಕಟ ರಾಘವನ್, ಲಕ್ಷ್ಮಿ ನಾರಾಯಣ, ಗುರುಪ್ರಸಾದ್, ಸಂತೋಷ್, ಸಬಾನ್, ವಿಜಯ್, ಸುಬ್ರಮಣಿ, ನಾಗಾರ್ಜುನ, ಶಶಿಕಲಾ, ಸದಾಶಿವ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>