<p><strong>ಮುಳಬಾಗಿಲು:</strong> ಕೇಂದ್ರ ಸರ್ಕಾರದ ಈಗಿನ ಬಜೆಟ್ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿದ ‘ಗಿಮಿಕ್ ಬಜೆಟ್’ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಟೀಕಿಸಿದರು.</p>.<p>ನಗರದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಅಪಾರ ಜಿಎಸ್ಟಿ ಹಣ ಕೇಂದ್ರಕ್ಕೆ ಹರಿದರೂ, ಬಜೆಟ್ ಹಂಚಿಕೆಯಲ್ಲಿ ರಾಜ್ಯದೊಂದಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ ಆರ್ಥಿಕ ಸುಧಾರಣೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಅನುದಾನದಲ್ಲಿ ಕೊರತೆ ಇರುವುದು ಅನ್ಯಾಯ ಎಂದರು.</p>.<p>ಬಿಜೆಪಿ ಆಳುವ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕಾಂಗ್ರೆಸ್ ಆಳುವ ರಾಜ್ಯಗಳಿಗೆ ಮಲತಾಯಿ ಮನೋಭಾವ ತೋರಿಸಲಾಗುತ್ತಿದೆ ಎಂದು ಟೀಕಿಸಿದರು. ಇದರಿಂದ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ವರ್ಗಗಳ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.</p>.<p>ಮುಂದಿನ ರಾಜ್ಯ ಬಜೆಟ್ ಎಲ್ಲ ವರ್ಗ ಮತ್ತು ಜಾತಿ-ಮತದ ಜನರಿಗೆ ಪಕ್ಷಾತೀತವಾಗಿ ಪ್ರಯೋಜನ ತಲುಪಿಸುವಂತೆ ಇರಲಿದೆ ಎಂದು ತಿಳಿಸಿದರು.</p>.<p>ಜಯದೇವ್, ತೊರಡಿ ಶಿವಣ್ಣ, ಹರಿಪ್ರಸಾದ್, ಡಾ.ಚರಣ್ ರಾಜ್ ಸೇರಿದ ಹಲವು ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ಕೇಂದ್ರ ಸರ್ಕಾರದ ಈಗಿನ ಬಜೆಟ್ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿದ ‘ಗಿಮಿಕ್ ಬಜೆಟ್’ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಟೀಕಿಸಿದರು.</p>.<p>ನಗರದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಅಪಾರ ಜಿಎಸ್ಟಿ ಹಣ ಕೇಂದ್ರಕ್ಕೆ ಹರಿದರೂ, ಬಜೆಟ್ ಹಂಚಿಕೆಯಲ್ಲಿ ರಾಜ್ಯದೊಂದಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ ಆರ್ಥಿಕ ಸುಧಾರಣೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಅನುದಾನದಲ್ಲಿ ಕೊರತೆ ಇರುವುದು ಅನ್ಯಾಯ ಎಂದರು.</p>.<p>ಬಿಜೆಪಿ ಆಳುವ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕಾಂಗ್ರೆಸ್ ಆಳುವ ರಾಜ್ಯಗಳಿಗೆ ಮಲತಾಯಿ ಮನೋಭಾವ ತೋರಿಸಲಾಗುತ್ತಿದೆ ಎಂದು ಟೀಕಿಸಿದರು. ಇದರಿಂದ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ವರ್ಗಗಳ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.</p>.<p>ಮುಂದಿನ ರಾಜ್ಯ ಬಜೆಟ್ ಎಲ್ಲ ವರ್ಗ ಮತ್ತು ಜಾತಿ-ಮತದ ಜನರಿಗೆ ಪಕ್ಷಾತೀತವಾಗಿ ಪ್ರಯೋಜನ ತಲುಪಿಸುವಂತೆ ಇರಲಿದೆ ಎಂದು ತಿಳಿಸಿದರು.</p>.<p>ಜಯದೇವ್, ತೊರಡಿ ಶಿವಣ್ಣ, ಹರಿಪ್ರಸಾದ್, ಡಾ.ಚರಣ್ ರಾಜ್ ಸೇರಿದ ಹಲವು ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>