ಪಟ್ಟಣದ ಅಮರಾವತಿ ನಗರ, ಮುನಿಯಪ್ಪ ಬಡಾವಣೆ, ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಗಳಲ್ಲಿ ಫೆಬ್ರುವರಿ ಅಂತ್ಯದವರೆಗೂ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈಗ 15 ದಿನಕ್ಕೊಮ್ಮೆ ಪೂರೈಕೆ ಆಗುತ್ತಿದೆ.
ಕೆಲ ವಾರ್ಡ್ಗಳಲ್ಲಿ 20 ದಿನವಾದರೂ ನೀರು ಪೂರೈಕೆಯಾಗುತ್ತಿಲ್ಲ. ಕೆರೆಗಳು ಬತ್ತಿಹೋಗಿ ವರ್ಷಗಳೇ ಕಳೆದಿದೆ. ಪಟ್ಟಣದ ನೀರು ಪೂರೈಕೆಗೆ ಆಧಾರವಾಗಿದ್ದ ಕೊಪ್ಪದಕೆರೆ ಸಂಪೂರ್ಣ ಒಣಗಿದೆ.