‘ಯಾವುದರಲ್ಲಿ ಭಕ್ತಿ ಇರುತ್ತದೆಯೋ ಅದರಲ್ಲಿ ಪಾವಿತ್ರ್ಯತೆ ಇರುತ್ತದೆ. ಯೋಗವು ಯಾವುದನ್ನೂ ಅಪವಿತ್ರ, ಕೀಳು ಎಂದು ಭಾವಿಸುವುದಿಲ್ಲ. ಸ್ಮಶಾನ ಕಾಯುವವನ ಕಾಯಕವು ಕೂಡ ದೈವಿಕವೇ. ಅವನು ಕೂಡ ಯೋಗಿಯೇ. ಮಹದೇವ ಈಶ್ವರನು ಆ ಕೆಲಸ ಮಾಡಿದ್ದಾನೆ. ಕನಕದಾಸ, ಪುರಂದರದಾಸ, ಬಸವಣ್ಣ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಅವರಂತಹ ಮಹನೀಯರಿಗೆ ಜನ್ಮ ಕೊಟ್ಟಂತಹ ನಮ್ಮ ದೇಶವನ್ನು ಮಕ್ಕಳು ಪ್ರೀತಿಸಬೇಕು’ ಎಂದರು.