<p><strong>ಯಲಬುರ್ಗಾ:</strong> ತಾಲ್ಲೂಕಿನ ಸಂಗನಾಳ ಗ್ರಾಮದ ಹತ್ತಿರ ಎರಡು ಕಾರುಗಳ ಮಧ್ಯೆ ನಡೆದ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾದ ಘಟನೆ ಭಾನುವಾರ ಜರುಗಿದೆ.</p>.<p>ಕೊಪ್ಪಳ ತಾಲ್ಲೂಕಿನ ಟಣಕನಕಲ್ಲ ಗ್ರಾಮದ ಸಂಪ್ರೀತ್ ಸಂಗಯ್ಯ ಹಿರೇಮಠ(1) ಮೃತ ಬಾಲಕ. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಮಹಾಲಕ್ಷ್ಮಿ ಕೋರಗಲ್ಲಮಠ, ಗಂಗಮ್ಮ, ಶಿವಪ್ಪ ಶರಣಯ್ಯ, ಪ್ರೀತಿ ಹಿರೇಮಠ, ವಿರೂಪಾಕ್ಷಯ್ಯ ಬಸಯ್ಯ ಕೋರಗಲ್ಲಮಠ ಅವರಿಗೆ ಬಲವಾದ ಮತ್ತು ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಂದು ಕಾರಿನಲ್ಲಿದ್ದ ಸಂಗನಾಳ ಗ್ರಾಮದ ಸಂಗಪ್ಪ ದೇವಪ್ಪ ಗಡಾದ, ಪ್ರಭುದೇವ ಶಾಂತಪ್ಪ ಹೊಸಂಗಡಿ ಅವರಿಗೂ ಗಾಯಗಳಾಗಿದ್ದು, ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.</p>.<p>ಕೊಪ್ಪಳ ಮೂಲದವರು ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಊರಿಗೆ ಮರಳುತ್ತಿದ್ದರು. ಸಂಗನಾಳ ಗ್ರಾಮದವರು ಚಿಕ್ಕೇನಕೊಪ್ಪದಿಂದ ತಮ್ಮ ಗ್ರಾಮಕ್ಕೆ ವಾಪಸಾಗುತ್ತಿದ್ದರು. ಎರಡು ಕಾರಿನ ಚಾಲಕರು ಅತೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.</p>.<p>ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ:</strong> ತಾಲ್ಲೂಕಿನ ಸಂಗನಾಳ ಗ್ರಾಮದ ಹತ್ತಿರ ಎರಡು ಕಾರುಗಳ ಮಧ್ಯೆ ನಡೆದ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾದ ಘಟನೆ ಭಾನುವಾರ ಜರುಗಿದೆ.</p>.<p>ಕೊಪ್ಪಳ ತಾಲ್ಲೂಕಿನ ಟಣಕನಕಲ್ಲ ಗ್ರಾಮದ ಸಂಪ್ರೀತ್ ಸಂಗಯ್ಯ ಹಿರೇಮಠ(1) ಮೃತ ಬಾಲಕ. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಮಹಾಲಕ್ಷ್ಮಿ ಕೋರಗಲ್ಲಮಠ, ಗಂಗಮ್ಮ, ಶಿವಪ್ಪ ಶರಣಯ್ಯ, ಪ್ರೀತಿ ಹಿರೇಮಠ, ವಿರೂಪಾಕ್ಷಯ್ಯ ಬಸಯ್ಯ ಕೋರಗಲ್ಲಮಠ ಅವರಿಗೆ ಬಲವಾದ ಮತ್ತು ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಂದು ಕಾರಿನಲ್ಲಿದ್ದ ಸಂಗನಾಳ ಗ್ರಾಮದ ಸಂಗಪ್ಪ ದೇವಪ್ಪ ಗಡಾದ, ಪ್ರಭುದೇವ ಶಾಂತಪ್ಪ ಹೊಸಂಗಡಿ ಅವರಿಗೂ ಗಾಯಗಳಾಗಿದ್ದು, ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.</p>.<p>ಕೊಪ್ಪಳ ಮೂಲದವರು ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಊರಿಗೆ ಮರಳುತ್ತಿದ್ದರು. ಸಂಗನಾಳ ಗ್ರಾಮದವರು ಚಿಕ್ಕೇನಕೊಪ್ಪದಿಂದ ತಮ್ಮ ಗ್ರಾಮಕ್ಕೆ ವಾಪಸಾಗುತ್ತಿದ್ದರು. ಎರಡು ಕಾರಿನ ಚಾಲಕರು ಅತೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.</p>.<p>ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>