<p><strong>ಕುಷ್ಟಗಿ:</strong> ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸೇವೆ ಉಚಿತವಾಗಿದ್ದರೂ ಬಡ ಕುಟುಂಬಕ್ಕೆ ಸೇರಿದ ಹತ್ತು ತಿಂಗಳ ತುಂಬು ಗರ್ಭಿಣಿಯನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲೂ ಬಸ್ನಲ್ಲಿ ಕಳಿಸುವ ಮೂಲಕ ಅಮಾನವೀಯ ರೀತಿಯಲ್ಲಿ ವರ್ತಿಸಿರುವುದು ಶುಕ್ರವಾರ ತಿಳಿದುಬಂದಿದೆ.</p>.<p>ತಾಲ್ಲೂಕಿನ ಕೂಡ್ಲೂರು ತವರು ಗ್ರಾಮದ ಹನುಮವ್ವ ಶಿವಪ್ಪ ಹರಿಜನ ಚೊಚ್ಚಲ ಗರ್ಭಿಣಿಯನ್ನು ತಂದೆ ಚಿದಾನಂದಪ್ಪ ಮೂಲಿಮನಿ ಮತ್ತು ಮುದೇನೂರಿನ ಆಶಾ ಕಾರ್ಯಕರ್ತೆ ಚನ್ನಮ್ಮ ಹಿರೇಮಠ ಶುಕ್ರವಾರ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು.</p>.<p>ಆದರೆ ಸದ್ಯ ಯಾರೂ ವೈದ್ಯರು ಇಲ್ಲ, ಅವಧಿ ಮೀರಿದ್ದು ತುರ್ತಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ. ಹಾಗಾದರೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಕೇಳಿದಾಗ 108 ವಾಹನಗಳೆಲ್ಲಾ ದುರಸ್ತಿಯಲ್ಲಿವೆ. ಆಸ್ಪತ್ರೆಯ ತುರ್ತು ಸೇವೆ ವಾಹನ ಬೇಕಾದರೆ ಇಂಧನಕ್ಕೆ ₹2000 ಕೊಡುವಂತೆ ಹೇಳಿದ್ದಾರೆ ಎಂದು ಗರ್ಭಿಣಿಯ ತಂದೆ ಚಿದಾನಂದಪ್ಪ ಮತ್ತು ಆಶಾ ಕಾರ್ಯಕರ್ತೆ ಚನ್ನಮ್ಮ ಹಿರೇಮಠ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.</p>.<p>ತಮಗೆ ಅಷ್ಟೊಂದು ಹಣ ಕೊಡಲಾಗುವುದಿಲ್ಲ ಎಂದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಅನಿವಾರ್ಯವಾಗಿ ಗರ್ಭಿಣಿಯನ್ನು ಬಸ್ನಲ್ಲಿ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸೇವೆ ಉಚಿತವಾಗಿದ್ದರೂ ಬಡ ಕುಟುಂಬಕ್ಕೆ ಸೇರಿದ ಹತ್ತು ತಿಂಗಳ ತುಂಬು ಗರ್ಭಿಣಿಯನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲೂ ಬಸ್ನಲ್ಲಿ ಕಳಿಸುವ ಮೂಲಕ ಅಮಾನವೀಯ ರೀತಿಯಲ್ಲಿ ವರ್ತಿಸಿರುವುದು ಶುಕ್ರವಾರ ತಿಳಿದುಬಂದಿದೆ.</p>.<p>ತಾಲ್ಲೂಕಿನ ಕೂಡ್ಲೂರು ತವರು ಗ್ರಾಮದ ಹನುಮವ್ವ ಶಿವಪ್ಪ ಹರಿಜನ ಚೊಚ್ಚಲ ಗರ್ಭಿಣಿಯನ್ನು ತಂದೆ ಚಿದಾನಂದಪ್ಪ ಮೂಲಿಮನಿ ಮತ್ತು ಮುದೇನೂರಿನ ಆಶಾ ಕಾರ್ಯಕರ್ತೆ ಚನ್ನಮ್ಮ ಹಿರೇಮಠ ಶುಕ್ರವಾರ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು.</p>.<p>ಆದರೆ ಸದ್ಯ ಯಾರೂ ವೈದ್ಯರು ಇಲ್ಲ, ಅವಧಿ ಮೀರಿದ್ದು ತುರ್ತಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ. ಹಾಗಾದರೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಕೇಳಿದಾಗ 108 ವಾಹನಗಳೆಲ್ಲಾ ದುರಸ್ತಿಯಲ್ಲಿವೆ. ಆಸ್ಪತ್ರೆಯ ತುರ್ತು ಸೇವೆ ವಾಹನ ಬೇಕಾದರೆ ಇಂಧನಕ್ಕೆ ₹2000 ಕೊಡುವಂತೆ ಹೇಳಿದ್ದಾರೆ ಎಂದು ಗರ್ಭಿಣಿಯ ತಂದೆ ಚಿದಾನಂದಪ್ಪ ಮತ್ತು ಆಶಾ ಕಾರ್ಯಕರ್ತೆ ಚನ್ನಮ್ಮ ಹಿರೇಮಠ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.</p>.<p>ತಮಗೆ ಅಷ್ಟೊಂದು ಹಣ ಕೊಡಲಾಗುವುದಿಲ್ಲ ಎಂದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಅನಿವಾರ್ಯವಾಗಿ ಗರ್ಭಿಣಿಯನ್ನು ಬಸ್ನಲ್ಲಿ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>