‘ಕಾಂಗ್ರೆಸ್ನಲ್ಲಿದ್ದುಕೊಂಡೇ ನನ್ನ ವಿರುದ್ಧ ಕೆಲಸ ಮಾಡಿದವರ ಕುತಂತ್ರದಿಂದಾಗಿ ಸೋಲಾಗಿದೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಮುಸ್ಲಿಂ ಸಮಾಜದ ವ್ಯಕ್ತಿ ಗೆಲ್ಲಬಾರದು ಎಂದು ಪಕ್ಷದ ಬ್ಲಾಕ್ ಘಟಕದ ಅಧ್ಯಕ್ಷ, ಗಂಗಾವತಿ ಹಾಗೂ ಕೊಪ್ಪಳದ ಮುಖಂಡರು ಸೇರಿಯೇ ಸೋಲಿನ ಬಲೆ ಹೆಣೆದಿದ್ದಾರೆ. ಮುಂಬರುವ ಚುನಾವಣೆಗೆ ಅವರಿಗೆಲ್ಲ ತಕ್ಕ ಪಾಠ ಕಲಿಸುತ್ತೇನೆ. ಮುಸ್ಲಿಂ ಸಮುದಾಯದವರ ಮನೆಮನೆಗೆ ಹೋಗಿ ಸೋಲಿಸಿದವರ ಕಥೆ ಹೇಳುತ್ತೇನೆ’ ಎಂದಿದ್ದಾರೆ.