ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವರ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ಧಾರ್ಮಿಕ, ಐತಿಹಾಸಿಕ ಪ್ರಸಿದ್ಧಿ ಪಡೆದ ಆನೆಗೊಂದಿ ರಂಗನಾಥಸ್ವಾಮಿ ದೇವರ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ನಡೆಯುತ್ತಿದೆ. ಸುತ್ತಲಿನ ಸಾಣಾಪುರ, ಹನುಮನಹಳ್ಳಿ, ರಂಗಾಪುರ, ಚಿಕ್ಕರಾಂಪುರ, ಆನೆಗೊಂದಿ, ಕಡೆಬಾಗಿಲು, ಬಸವನ ದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಂಗಾಪುರ ಗ್ರಾಮಗಳ ಭಕ್ತರು ತೇರಿಗೆ ಬಾಳೆಹಣ್ಣು,ಉತ್ತತ್ತಿ ಎಸೆದು ಕೃತಾರ್ಥರಾದರು.