<p><strong>ಕುಷ್ಟಗಿ:</strong> ಕಾಲ ಬದಲಾಗುತ್ತಿದ್ದಂತೆ ಪರಿಸರದಲ್ಲಿನ ಸಹಜ ಪಕ್ಷಿಸಂಕುಲಗಳಲ್ಲಿ ಒಂದಾಗಿರುವ ಗುಬ್ಬಚ್ಚಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದ್ದು ಪರಿಸರ ಸಮತೋಲನಕ್ಕೆ ಗುಬ್ಬಿಗಳ ಸಂತತಿ ಹೆಚ್ಚಳ ಅಗತ್ಯ ಎಂದು ಸುಜಲಾನ್ ಫೌಂಡೇಶನ್ ವ್ಯವಸ್ಥಾಪಕ ಅಜಿತ್ ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಕ್ಯಾದಿಗುಪ್ಪಾ ಸರ್ಕಾರಿ ಪ್ರೌಢಶಾಲೆಯ ಪರಿಸರ ಸಂಘ, ಆರ್ಡರ್ ಮತ್ತು ನೀಡ್ಸ್ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಗುಬ್ಬಿಗಳ ಸಂರಕ್ಷಣಾ ಅಭಿಯಾನದಲ್ಲಿ ಮಾತನಾಡಿದ ಅವರು, ‘ಗುಬ್ಬಚ್ಚಿಗಳ ಸಂತತಿ ಬೆಳೆಸುವುದಕ್ಕೆ ಪೂರಕ ಅವಕಾಶಗಳನ್ನು ಕಲ್ಪಿಸಬೇಕಾಗುತ್ತದೆ. ಪರಿಸರದ ಸಹಜ ಸೌಂದರ್ಯದಲ್ಲಿ ಗುಬ್ಬಿಗಳ ಪಾತ್ರವೂ ಬಹುಮುಖ್ಯವಾಗಿರುತ್ತದೆ. ಹಾಗಾಗಿ ಈ ವಿಷಯದಲ್ಲಿ ಜನರಲ್ಲಿ ಅರಿವು ಹೆಚ್ಚಿಸುವ ಅಗತ್ಯವಿದೆ’ ಎಂದರು.</p>.<p>ನೀಡ್ ಸಂಸ್ಥೆಯ ಉಳವಪ್ಪ, ಆರ್ಡರ್ ಸಂಸ್ಥೆಯ ಮಂಜುನಾಥ, ಮುಖ್ಯಶಿಕ್ಷಕ ರಾಜೇಂದ್ರ ಸಿನ್ನೂರ, ಶಿಕ್ಷಕರಾದ ಬಸವರಾಜ ವಾಲಿಕಾರ ಮಾತನಾಡಿದರು. ಹನುಮಂತ ರಾಯಬಾಗಿ, ಗೀತಾ ದೇವಾಂಗಮಠ, ಮಹಾಂತೇಶ ಹೊಸಮನಿ, ಎಸ್.ಎಸ್.ಅಂಗಡಿ, ಪ್ರಶಿಕ್ಷಣಾರ್ಥಿಗಳಾದ ಸಂಗಮೇಶ ಗೂಳಿ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<p>ಇದೇ ಸಂದರ್ಭದಲ್ಲಿ ಗುಬ್ಬಿಗಳನ್ನು ಸಂರಕ್ಷಿಸುವುದಕ್ಕೆ ಅಗತ್ಯವಾದ ಗುಬ್ಬಚ್ಚಿಯ ಗೂಡುಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಕಾಲ ಬದಲಾಗುತ್ತಿದ್ದಂತೆ ಪರಿಸರದಲ್ಲಿನ ಸಹಜ ಪಕ್ಷಿಸಂಕುಲಗಳಲ್ಲಿ ಒಂದಾಗಿರುವ ಗುಬ್ಬಚ್ಚಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದ್ದು ಪರಿಸರ ಸಮತೋಲನಕ್ಕೆ ಗುಬ್ಬಿಗಳ ಸಂತತಿ ಹೆಚ್ಚಳ ಅಗತ್ಯ ಎಂದು ಸುಜಲಾನ್ ಫೌಂಡೇಶನ್ ವ್ಯವಸ್ಥಾಪಕ ಅಜಿತ್ ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಕ್ಯಾದಿಗುಪ್ಪಾ ಸರ್ಕಾರಿ ಪ್ರೌಢಶಾಲೆಯ ಪರಿಸರ ಸಂಘ, ಆರ್ಡರ್ ಮತ್ತು ನೀಡ್ಸ್ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಗುಬ್ಬಿಗಳ ಸಂರಕ್ಷಣಾ ಅಭಿಯಾನದಲ್ಲಿ ಮಾತನಾಡಿದ ಅವರು, ‘ಗುಬ್ಬಚ್ಚಿಗಳ ಸಂತತಿ ಬೆಳೆಸುವುದಕ್ಕೆ ಪೂರಕ ಅವಕಾಶಗಳನ್ನು ಕಲ್ಪಿಸಬೇಕಾಗುತ್ತದೆ. ಪರಿಸರದ ಸಹಜ ಸೌಂದರ್ಯದಲ್ಲಿ ಗುಬ್ಬಿಗಳ ಪಾತ್ರವೂ ಬಹುಮುಖ್ಯವಾಗಿರುತ್ತದೆ. ಹಾಗಾಗಿ ಈ ವಿಷಯದಲ್ಲಿ ಜನರಲ್ಲಿ ಅರಿವು ಹೆಚ್ಚಿಸುವ ಅಗತ್ಯವಿದೆ’ ಎಂದರು.</p>.<p>ನೀಡ್ ಸಂಸ್ಥೆಯ ಉಳವಪ್ಪ, ಆರ್ಡರ್ ಸಂಸ್ಥೆಯ ಮಂಜುನಾಥ, ಮುಖ್ಯಶಿಕ್ಷಕ ರಾಜೇಂದ್ರ ಸಿನ್ನೂರ, ಶಿಕ್ಷಕರಾದ ಬಸವರಾಜ ವಾಲಿಕಾರ ಮಾತನಾಡಿದರು. ಹನುಮಂತ ರಾಯಬಾಗಿ, ಗೀತಾ ದೇವಾಂಗಮಠ, ಮಹಾಂತೇಶ ಹೊಸಮನಿ, ಎಸ್.ಎಸ್.ಅಂಗಡಿ, ಪ್ರಶಿಕ್ಷಣಾರ್ಥಿಗಳಾದ ಸಂಗಮೇಶ ಗೂಳಿ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<p>ಇದೇ ಸಂದರ್ಭದಲ್ಲಿ ಗುಬ್ಬಿಗಳನ್ನು ಸಂರಕ್ಷಿಸುವುದಕ್ಕೆ ಅಗತ್ಯವಾದ ಗುಬ್ಬಚ್ಚಿಯ ಗೂಡುಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>