<p><strong>ಕೊಪ್ಪಳ</strong>: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಟಾಟಾ ಕಲಿಕಾ ಟ್ರಸ್ಟ್ ಸಹಯೋಗದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ವಿಶೇಷ ಆಂದೋಲನ ನಡೆಸಲಾಯಿತು. ಸೋಮವಾರ ಶಾಲೆಗೆ ಬಂದ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.</p>.<p>ಹೆಣ್ಣು ಮಕ್ಕಳು ಕುಂಭ ಹೊತ್ತು ಸಾಗಿದರೆ, ಬಾಲಕರು ಕೋಲಾಟ ನೃತ್ಯ ಮಾಡಿ ಗಮನ ಸೆಳೆದರು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಛದ್ಮವೇಷಧಾರಿಗಳಾಗಿದ್ದರು.</p>.<p>ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಡಕಪ್ಪ ರಾಮನಳ್ಳಿ ಮಾತನಾಡಿ, ‘ಒಂದನೇ ತರಗತಿಗೆ ಪ್ರವೇಶ ಪಡೆಯಲು ಐದು ವರ್ಷ ಐದು ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು. ಮಗು ನಿಯಮಿತವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಜವಾಬ್ದಾರಿ ಮೇಲಿದೆ’ ಎಂದರು.</p>.<p>ಟಾಟಾ ಕಲಿಕಾ ಟ್ರಸ್ಟ್ ಸಂಯೋಜಕ ಕಲ್ಲೇಶ ತಳವಾರ ಮಾತನಾಡಿ ‘ಅರ್ಹ ವಯಸ್ಸಿನ ಮಕ್ಕಳು ಶಾಲೆಗೆ ದಾಖಲಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು. ಸಮುದಾಯ, ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.</p>.<p>ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ಪ ಮುರುಡಿ, ಸಣ್ಣ ಯಮನೂರಪ್ಪ ಬಗನಾಳ, ಊರಿನ ಹಿರಿಯರಾದ ತಾಯಪ್ಪ, ಯಡಿಯಪ್ಪ ಭೋವಿ, ಬಡಕಪ್ಪ,, ರಾಘು ಬಡಿಗೇರ, ಹನುಮಪ್ಪ ಮುರುಡಿ, ಬಸವರಾಜ ಮುಂಡರಗಿ, ಸತ್ಯಪ್ಪ, ಯಮನೂರಪ್ಪ ಕುಟಗನಹಳ್ಳಿ, ಮಲ್ಲಪ್ಪ ಹೊಸಳ್ಳಿ, ಇರಕಲ್ಲಗಡ ಸಿಆರ್ಪಿ ಸಂತೋಷ್ , ಶಿಕ್ಷಕರಾದ ಕೊಟ್ರೇಶ್, ಮಲ್ಲಪ್ಪ, ಕಿರಣ, ಮಂಜಪ್ಪ, ಯಮನೂರಪ್ಪ, ಮುರಗೇಶ್, ಪ್ರಾಣೇಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಟಾಟಾ ಕಲಿಕಾ ಟ್ರಸ್ಟ್ ಸಹಯೋಗದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ವಿಶೇಷ ಆಂದೋಲನ ನಡೆಸಲಾಯಿತು. ಸೋಮವಾರ ಶಾಲೆಗೆ ಬಂದ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.</p>.<p>ಹೆಣ್ಣು ಮಕ್ಕಳು ಕುಂಭ ಹೊತ್ತು ಸಾಗಿದರೆ, ಬಾಲಕರು ಕೋಲಾಟ ನೃತ್ಯ ಮಾಡಿ ಗಮನ ಸೆಳೆದರು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಛದ್ಮವೇಷಧಾರಿಗಳಾಗಿದ್ದರು.</p>.<p>ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಡಕಪ್ಪ ರಾಮನಳ್ಳಿ ಮಾತನಾಡಿ, ‘ಒಂದನೇ ತರಗತಿಗೆ ಪ್ರವೇಶ ಪಡೆಯಲು ಐದು ವರ್ಷ ಐದು ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು. ಮಗು ನಿಯಮಿತವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಜವಾಬ್ದಾರಿ ಮೇಲಿದೆ’ ಎಂದರು.</p>.<p>ಟಾಟಾ ಕಲಿಕಾ ಟ್ರಸ್ಟ್ ಸಂಯೋಜಕ ಕಲ್ಲೇಶ ತಳವಾರ ಮಾತನಾಡಿ ‘ಅರ್ಹ ವಯಸ್ಸಿನ ಮಕ್ಕಳು ಶಾಲೆಗೆ ದಾಖಲಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು. ಸಮುದಾಯ, ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.</p>.<p>ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ಪ ಮುರುಡಿ, ಸಣ್ಣ ಯಮನೂರಪ್ಪ ಬಗನಾಳ, ಊರಿನ ಹಿರಿಯರಾದ ತಾಯಪ್ಪ, ಯಡಿಯಪ್ಪ ಭೋವಿ, ಬಡಕಪ್ಪ,, ರಾಘು ಬಡಿಗೇರ, ಹನುಮಪ್ಪ ಮುರುಡಿ, ಬಸವರಾಜ ಮುಂಡರಗಿ, ಸತ್ಯಪ್ಪ, ಯಮನೂರಪ್ಪ ಕುಟಗನಹಳ್ಳಿ, ಮಲ್ಲಪ್ಪ ಹೊಸಳ್ಳಿ, ಇರಕಲ್ಲಗಡ ಸಿಆರ್ಪಿ ಸಂತೋಷ್ , ಶಿಕ್ಷಕರಾದ ಕೊಟ್ರೇಶ್, ಮಲ್ಲಪ್ಪ, ಕಿರಣ, ಮಂಜಪ್ಪ, ಯಮನೂರಪ್ಪ, ಮುರಗೇಶ್, ಪ್ರಾಣೇಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>