ಅಳವಂಡಿ: ಸಮೀಪದ ಮೈನಳ್ಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಗ್ರಾಮದ ಪ್ರಗತಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕು ಸಂಯೋಜಕರಾದ ವೀರೇಶ ಹಾಲಗುಂಡಿ, ವಿಕಾಸ ಅಕಾಡೆಮಿ ಸದ್ಯಸ ಸಿದ್ದರೆಡ್ಡಿ, ಪ್ರಗತಿ ಕೇಂದ್ರದ ಶಿಕ್ಷಕಿ ಸುಮಂಗಲಾ ಎಸ್ ಹಾಗೂ ಮಕ್ಕಳು ಈ ವೇಳೆ ಭಾಗವಹಿಸಿದ್ದರು.