ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಳಿಗೆ ವಿವಿಧೆಡೆ ಶ್ರದ್ಧಾಂಜಲಿ

Last Updated 30 ಡಿಸೆಂಬರ್ 2019, 10:02 IST
ಅಕ್ಷರ ಗಾತ್ರ

ಕಾರಟಗಿ: ‘ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನಿಧನಕ್ಕೆ ಪಟ್ಟಣದ ದಲಾಲಿ ವರ್ತಕರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಯಬೇಕಿದ್ದ ಸಮಾರೋಪ ಸಮಾರಂಭವನ್ನು ಮುಂದೂಡಿ ಭಾವಪೂರ್ಣ ಶ್ರದ್ಧಾಂಜಲಿ ಭಾನುವಾರ ಸಲ್ಲಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಕಾರ್ಯದರ್ಶಿ ಭೀಮಣ್ಣ ಕರಡಿ, ಜಿಲ್ಲಾ ಮಹಿಳಾ ಘಟಕದ ಪ್ರತಿನಿಧಿ ವಿಜಯಲಕ್ಷ್ಮೀ ಮೇಲಿನಮನಿ, ತಾಲ್ಲೂಕು ಪ್ರತಿನಿಧಿ ಸುರೇಖಾ, ದಲಾಲಿ ವರ್ತಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಶರಣಯ್ಯಸ್ವಾಮಿ ಪ್ರಮುಖರಾದ ಬಸವರಾಜ ರ್ಯಾವಳದ, ತಿಮ್ಮಣ್ಣ ನಾಯಕ, ವೀರೂಪಾಕ್ಷೇಶ ತಲೇಖಾನಮಠ, ಮಂಜುನಾಥ ಮಸ್ಕಿ, ಶ್ಯಾಮ್‌ಸುಂದರ್, ಬಸವರಾಜ ಹೊಸಮನಿ, ರಮೇಶ ಕುಕನೂರು, ತೋಟಯ್ಯ ಅಂಗಡಿ, ಡಾ. ರಾಮಣ್ಣ, ವಿದ್ಯಾಧರಗೌಡ ಇದ್ದರು.

ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಪುರಸಭೆ ಸದಸ್ಯ ಸಿದ್ರಾಮಯ್ಯಸ್ವಾಮಿ ಹಿರೇಮಠ, ವಿಶೇಷ ಎಪಿಎಂಸಿ ಸದಸ್ಯ ಸಣ್ಣೆಪ್ಪ ಸೋಮನಾಳ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ವಾಣಿಜ್ಯೋದ್ಯಮಿ ಎಲ್ವಿಟಿ ಕೆ. ಸಣ್ಣಸೂಗಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಿರೇಬಸಪ್ಪ ಸಜ್ಜನ್ ಪ್ರಮುಖರಾದ ನಾಗರಾಜ ಕುಲ್ಕರ್ಣಿ, ಟಿ. ವಿ. ಉಮೇಶ ಸಜ್ಜನ್, ವಿಠಲರಾವ್ ಕೊಳ್ಳಿ, ಶರಣಪ್ಪ ಗದ್ದಿ, ಸುರೇಶಪ್ಪ ದಳಪತಿ, ಶರಣಪ್ಪ ಕಟಾಂಬ್ಲಿ, ಸತ್ಯನಾರಾಯಣ ಕುಲ್ಕರ್ಣಿ, ಶರಣಪ್ಪ ದೇವರಮನಿ, ಶಶಿ ಮೇದಾರ, ಚಂದ್ರಶೇಖರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT