<p><strong>ಕೊಪ್ಪಳ:</strong> ನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಗುರುವಾರ ರಾತ್ರಿ ಕಾರ್ತೀಕೋತ್ಸವ ಅಂಗವಾಗಿ ಸಾವಿರಾರು ದೀಪವನ್ನು ಸಂಭ್ರಮದಿಂದ ಬೆಳಗಲಾಯಿತು.</p>.<p>ಬೆಳಿಗ್ಗೆ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೀಪಾರಾಧನೆ ನಡೆಯಿತು. ದೇವಾಲಯದ ಸುತ್ತಮುತ್ತ ವಿವಿಧ ಆಕಾರಗಳಲ್ಲಿ ದೀಪಗಳನ್ನು ಹಚ್ಚಿಡಲಾಗಿತ್ತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಸಡಗರದಿಂದ ಪಾಲ್ಗೊಂಡರು. ಪ್ರಾಣದೇವರ ದೇವಸ್ಥಾನದಲ್ಲಿ ದೀಪವನ್ನು ಬೆಳಗಿದರು. ದೀಪೋತ್ಸವದ ಅಂಗವಾಗಿ ನಡೆದ ರಂಗೋಲಿ ಕಾರ್ಯಕ್ರಮ ಆಕರ್ಷಕವಾಗಿತ್ತು.</p>.<p>ಹರಕೆ ಹೊತ್ತ ಮತ್ತು ಆಸ್ತಿಕ ಭಕ್ತರು ತೈಲ, ದೀಪವನ್ನು ಖರೀದಿಸಿ ಆವರಣದಲ್ಲಿ ಬೆಳಗಿಸಿದರು. ದೀಪದ ಬೆಳಕಿನಲ್ಲಿ ದೇವಾಲಯದ ಸುಂದರವಾಗಿ ಕಾಣುತ್ತಿತ್ತು. ಉತ್ಸವದ ಅಂಗವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.</p>.<p>ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದಲ್ಲಿ ಧಾರ್ಮಿಕ ಪುಸ್ತಕ, ಪೂಜಾ ಸಲಕರಣೆಗಳ ಮಾರಾಟ ಚೆನ್ನಾಗಿ ನಡೆಯಿತು.</p>.<p>ದೀಪೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಸಮುದಾಯದ ಜನರು ನೆರೆವೇರಿಸಿದರು. ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ,ಸುಪ್ರಭಾತ, ವಿಶೇಷ ಪೂಜೆ,ಪ್ರಾಣ ದೇವರಿಗೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ತೀಕೋತ್ಸವ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಗುರುವಾರ ರಾತ್ರಿ ಕಾರ್ತೀಕೋತ್ಸವ ಅಂಗವಾಗಿ ಸಾವಿರಾರು ದೀಪವನ್ನು ಸಂಭ್ರಮದಿಂದ ಬೆಳಗಲಾಯಿತು.</p>.<p>ಬೆಳಿಗ್ಗೆ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೀಪಾರಾಧನೆ ನಡೆಯಿತು. ದೇವಾಲಯದ ಸುತ್ತಮುತ್ತ ವಿವಿಧ ಆಕಾರಗಳಲ್ಲಿ ದೀಪಗಳನ್ನು ಹಚ್ಚಿಡಲಾಗಿತ್ತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಸಡಗರದಿಂದ ಪಾಲ್ಗೊಂಡರು. ಪ್ರಾಣದೇವರ ದೇವಸ್ಥಾನದಲ್ಲಿ ದೀಪವನ್ನು ಬೆಳಗಿದರು. ದೀಪೋತ್ಸವದ ಅಂಗವಾಗಿ ನಡೆದ ರಂಗೋಲಿ ಕಾರ್ಯಕ್ರಮ ಆಕರ್ಷಕವಾಗಿತ್ತು.</p>.<p>ಹರಕೆ ಹೊತ್ತ ಮತ್ತು ಆಸ್ತಿಕ ಭಕ್ತರು ತೈಲ, ದೀಪವನ್ನು ಖರೀದಿಸಿ ಆವರಣದಲ್ಲಿ ಬೆಳಗಿಸಿದರು. ದೀಪದ ಬೆಳಕಿನಲ್ಲಿ ದೇವಾಲಯದ ಸುಂದರವಾಗಿ ಕಾಣುತ್ತಿತ್ತು. ಉತ್ಸವದ ಅಂಗವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.</p>.<p>ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದಲ್ಲಿ ಧಾರ್ಮಿಕ ಪುಸ್ತಕ, ಪೂಜಾ ಸಲಕರಣೆಗಳ ಮಾರಾಟ ಚೆನ್ನಾಗಿ ನಡೆಯಿತು.</p>.<p>ದೀಪೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಸಮುದಾಯದ ಜನರು ನೆರೆವೇರಿಸಿದರು. ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ,ಸುಪ್ರಭಾತ, ವಿಶೇಷ ಪೂಜೆ,ಪ್ರಾಣ ದೇವರಿಗೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ತೀಕೋತ್ಸವ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>